- Advertisement -
- Advertisement -
ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಷನ್ ಮತ್ತು ಸುದಾನ ವಸತಿಯುತ ವಿದ್ಯಾಸಂಸ್ಥೆ ಪುತ್ತೂರು ಇದರ ಸಹಯೋಗದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14 ರ ವಯೋಮಾನದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಪುತ್ತೂರು ತಾಲೂಕಿನಿಂದ ಪ್ರತಿನಿಧಿಸಿದ ದರ್ಬೆ ಬೆಥನಿ ವಿದ್ಯಾಸಂಸ್ಥೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಪಂದ್ಯಾಟದಲ್ಲಿ ಎಸ್ ಮೊಹಮ್ಮದ್ ಹನಿನ್ ಬೆಸ್ಟ್ ಅಟ್ಯಾಕರ್ ಹಾಗೂ ಮೊಹಮ್ಮದ್ ಶಾನ್ ಬೆಸ್ಟ್ ಸೆಟರ್ ಆಗಿ ಹೊರ ಹೊಮ್ಮಿದ್ದಾರೆ. ಹಾಗೆಯೇ ಗಗನ್ ದೀಪ್ ಬಿ.ಎಂ, ಕಿರಣ್, ಮೊಹಮ್ಮದ್ ಶಾಜದ್, ಕ್ಲೇಟನ್ ದೀಕ್ಷಾನ್ ತೋರಸ್, ಅನ್ವಿತ್ ರೈ, ಬಿ ಈಶನ್ ಪ್ರಭು, ಪ್ರಥಮ್ ಕಶ್ಯಪ್, ಮೊಹಮದ್ ತಬಿಶೇರ್, ಆಯಾತುಲ್ಲ ಸಲೀಂ, ಇಬ್ರಾಹಿಂ ಫಾಶಿಲ್, ಮೊಹಮದ್ ಸುಹಾನ್, ಇವರೆಲ್ಲ ತಂಡದಲ್ಲಿದ್ದರು.
ನಿರಂಜನ್ ಹಾಗೂ ಅಕ್ಷಯ್ ಈ ತಂಡಕ್ಕೆ ತರಬೇತಿಯನ್ನು ನೀಡಿರುತ್ತಾರೆ. ಮುಖ್ಯ ಶಿಕ್ಷಕಿ ಭಗಿಣಿ ಸೆಲಿನ್ ಪೇತ್ರಾರವರು ಶುಭ ಹಾರೈಸಿರುತ್ತಾರೆ.
- Advertisement -