Monday, April 29, 2024
spot_imgspot_img
spot_imgspot_img

ಗಣಪತಿ ವಿಸರ್ಜನೆ ವೇಳೆ ವ್ಯಕ್ತಿ ನೀರುಪಾಲು..!

- Advertisement -G L Acharya panikkar
- Advertisement -

ಗಣಪತಿ ವಿಸರ್ಜನೆ ವೇಳೆ ವ್ಯಕ್ತಿಯೋರ್ವ ನೀರು ಪಾಲಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅನಂದಪುರ ಬಳಿಯ ಜೇಡಿಸರದಲ್ಲಿ ನಡೆದಿದೆ. ಸತೀಶ್ ಗೌಡ(45) ಎಂಬ ವ್ಯಕ್ತಿ ನೀರು ಪಾಲಾಗಿದ್ದಾರೆ.

ಸತೀಶ್​ ಗೌಡ ಗಣಪತಿ ವಿಸರ್ಜನೆಗಾಗಿ ‌ಆಳ ನೋಡಲು ಜೇಡಿಸರ ಕೆರೆಗೆ ಇಳಿದಿದ್ದರು. ಜೇಡಿಸರ ಕೆರೆಗೆ ಇಳಿದ ವೇಳೆ ಆಯ ತಪ್ಪಿ ನೀರು ಪಾಲಾಗಿದ್ದಾರೆ.

ವೃತ್ತಿಯಲ್ಲಿ ಅಡುಗೆ ಕಂಟ್ರಾಕ್ಟರ್ ಆಗಿದ್ದ ಸತೀಶ್ ಗೌಡ​ ಬಾವನ ಮನೆಯಲ್ಲಿ ಇಟ್ಟಿದ್ದ ಗಣಪತಿ ಹಬ್ಬ ಆಚರಿಸಲು ಬಂದಿದ್ದರು. ಗಣಪತಿ ವಿಸರ್ಜನೆಗಾಗಿ ಕೆರೆ ಬಳಿ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ.

- Advertisement -

Related news

error: Content is protected !!