- Advertisement -
- Advertisement -
ಗಣಪತಿ ವಿಸರ್ಜನೆ ವೇಳೆ ವ್ಯಕ್ತಿಯೋರ್ವ ನೀರು ಪಾಲಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅನಂದಪುರ ಬಳಿಯ ಜೇಡಿಸರದಲ್ಲಿ ನಡೆದಿದೆ. ಸತೀಶ್ ಗೌಡ(45) ಎಂಬ ವ್ಯಕ್ತಿ ನೀರು ಪಾಲಾಗಿದ್ದಾರೆ.
ಸತೀಶ್ ಗೌಡ ಗಣಪತಿ ವಿಸರ್ಜನೆಗಾಗಿ ಆಳ ನೋಡಲು ಜೇಡಿಸರ ಕೆರೆಗೆ ಇಳಿದಿದ್ದರು. ಜೇಡಿಸರ ಕೆರೆಗೆ ಇಳಿದ ವೇಳೆ ಆಯ ತಪ್ಪಿ ನೀರು ಪಾಲಾಗಿದ್ದಾರೆ.
ವೃತ್ತಿಯಲ್ಲಿ ಅಡುಗೆ ಕಂಟ್ರಾಕ್ಟರ್ ಆಗಿದ್ದ ಸತೀಶ್ ಗೌಡ ಬಾವನ ಮನೆಯಲ್ಲಿ ಇಟ್ಟಿದ್ದ ಗಣಪತಿ ಹಬ್ಬ ಆಚರಿಸಲು ಬಂದಿದ್ದರು. ಗಣಪತಿ ವಿಸರ್ಜನೆಗಾಗಿ ಕೆರೆ ಬಳಿ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ.
- Advertisement -