Friday, April 26, 2024
spot_imgspot_img
spot_imgspot_img

“ಮನೆ ಮನೆಗೆ ತೆರಳಿ ರೈತರಿಗೆ ಕೃಷಿ ಮಸೂದೆ ಬಗ್ಗೆ ತಿಳಿಸಿ” ಬಿಜೆಪಿ ಕಾರ್ಯಕರ್ತರಿಗೆ ಮೋದಿ ಸೂಚನೆ

- Advertisement -G L Acharya panikkar
- Advertisement -

ನವದೆಹಲಿ: ಎಲ್ಲಾ ಬಿಜೆಪಿ ಕಾರ್ಯಕರ್ತರು ಫೀಲ್ಡಿಗಿಳಿದು, ರೈತರನ್ನ ಭೇಟಿಯಾಗಿ ಹೊಸ ಕೃಷಿ ಮಸೂದೆಗಳ ಮಹತ್ವದ ಬಗ್ಗೆ ತಿಳಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಪಂಡಿತ್ ದೀನ ದಯಾಳ್​ ಉಪಾಧ್ಯಯ್​ ಗ್ರಾಮೀಣ ಕೌಶಲ್ಯ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದರು. ಈ ವೇಳೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಮಸೂದೆ ಬಗ್ಗೆ ಹರಿದಾಡುತ್ತಿರೋ ವದಂತಿ ಹಾಗೂ ಸುಳ್ಳುಗಳಿಗೆ ಅಂತ್ಯ ಹಾಡಬೇಕು ಎಂದು ಹೇಳಿದರು.

ಹಿಂದಿನ ಸರ್ಕಾರಗಳು ಅನೇಕ ಕ್ಲಿಷ್ಟಕರ ಹಾಗೂ ಸಂಕೀರ್ಣವಾದ ಭರವಸೆ ಮತ್ತು ಕಾನೂನು ತರುತ್ತಿದ್ದರು. ಅದನ್ನ ರೈತರು ಹಾಗೂ ಕಾರ್ಮಿಕರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದ್ರೆ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ, ಈ ಪರಿಸ್ಥಿತಿಯನ್ನ ಬದಲಾಯಿಸಲು ಸತತ ಪ್ರಯತ್ನ ಮಾಡಿದೆ. ರೈತರ ಕಲ್ಯಾಣಕ್ಕಾಗಿ ಸುಧಾರಣೆಗಳನ್ನ ತಂದಿದೆ ಎಂದು ಹೇಳಿದರು.

- Advertisement -

Related news

error: Content is protected !!