ಅತ್ತೆ-ಸೊಸೆ ಜಗಳದಲ್ಲಿ 9 ತಿಂಗಳ ಹಸುಗೂಸು ಸಾವನ್ನಪ್ಪಿರುವ ಘಟನೆ ಗಜೇಂದ್ರಗಢ ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ನಡೆದಿದೆ.
ಮಗುವಿನ ತಾಯಿ ನಾಗರತ್ನ, ಅತ್ತೆ ಸರೋಜಾ ಎಂದು ಗುರುತಿಸಲಾಗಿದೆ.
ನನ್ನ ಮಗುವನ್ನು ಸಾಯಿಸಿದ್ದಾಳೆ ಎಂದು ಆರೋಪಿಸಿ ಮಗುವಿನ ತಾಯಿ ನಾಗರತ್ನ, ಅತ್ತೆ ಸರೋಜಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ನಾನು ಹೆರಿಗೆ ಆದ ಐದು ತಿಂಗಳ ಬಳಿಕ ಗಂಡನ ಮನೆ ಅಂದರೆ ನನ್ನ ಮನೆಗೆ ಬಂದಿದ್ದೆ. ಆಗ ಅತ್ತೆ ಸರೋಜಾ ನನ್ನನ್ನು ಕಂಡು ಕೋಪಿಸಿಕೊಂಡರು. ಇಷ್ಟು ಬೇಗ ಮಗು ಬೇಕಿತ್ತಾ ನಿಂಗೆ ಎಂದು ಸಿಟ್ಟಿನಿಂದ ಪ್ರಶ್ನೆ ಮಾಡಿದ್ದಾರೆ. ಕೊನೆಗೆ ನನ್ನ ಮಗಳಿಗೆ ಅಡಿಕೆ ಹೋಳು, ಎಲೆ ನೀಡಿ ಉಸಿರುಗಟ್ಟಿಸಿ ಕೊಂದಿರುವುದಾಗಿ ಆರೋಪಿಸಿ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ .
ನಾಗರತ್ನ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ನಿನ್ನೆ ಗದಗ ಎಸಿ ವೆಂಕಟೇಶ ನಾಯಕ್, ಸಿಪಿಐ ಎಸ್ ಎಸ್ ಬೀಳಗಿ ನೇತೃತ್ವದಲ್ಲಿ ಮಗುವಿನ ಶವ ತೆಗೆದು ಪರಿಶೀಲನೆ ಮಾಡಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗೆ ಶವವನ್ನು ಕಳುಹಿಸಿದ್ದಾರೆ.