Wednesday, August 5, 2026
spot_imgspot_img
spot_imgspot_img

ಬೆಂಗಳೂರಲ್ಲಿ ಭಾರೀ ಅಗ್ನಿ ಅವಘಡ – 40ಕ್ಕೂ ಹೆಚ್ಚು ಶೆಡ್‌ಗಳು ಭಸ್ಮ

- Advertisement -
- Advertisement -

ನಾಗವಾರ ಬಳಿಯ ವೀರಣ್ಣಪಾಳ್ಯದಲ್ಲಿರುವ ಕಾರ್ಮಿಕರ ಶೆಡ್‌ಗಳ ಗುಂಪಿನಲ್ಲಿ ಶನಿವಾರ ಸಂಜೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, 50 ತಾತ್ಕಾಲಿಕ ಶೆಡ್‌ಗಳಲ್ಲಿ 40 ಕ್ಕೂ ಹೆಚ್ಚು ಶೆಡ್ ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಪ್ರಕಾರ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.ವೀರಣ್ಣಪಾಳ್ಯ ಮುಖ್ಯ ರಸ್ತೆಯಲ್ಲಿರುವ ಖಾಸಗಿ ಶಾಲೆಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಈ ಶೆಡ್‌ಗಳನ್ನು ನಿರ್ಮಿಸಲಾಗಿತ್ತು. ಒಂದು ಶೆಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದು ವೇಗವಾಗಿ ಇತರ ಶೆಡ್ ಗೂ ಹರಡಿತು ಎಂದು ಗೋವಿಂದಪುರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ತೀವ್ರಗೊಳ್ಳುವ ಮೊದಲು ಹೆಚ್ಚಿನ ನಿವಾಸಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎನ್ನಲಾಗಿದೆ.

“ನಾನು ನನ್ನ ಸ್ನೇಹಿತರೊಂದಿಗೆ ಕುಳಿತಿದ್ದಾಗ ಶೆಡ್‌ ಗಳಿಂದ ಹೊಗೆ ಬರುತ್ತಿರುವುದನ್ನು ನಾವು ನೋಡಿದೆವು. ನಾವು ಧಾವಿಸಿ ಹತ್ತಿರದ ಸ್ಮಶಾನದಿಂದ ನೀರಿನ ಮೋಟಾರ್ ಬಳಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದೆವು, ಆದರೆ ಬೆಂಕಿ ಹರಡುತ್ತಲೇ ಇದ್ದಾಗ, ನಾನು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದೇನೆ.” ಹತ್ತಿರದ ಅಪಾರ್ಟ್‌ಮೆಂಟ್‌ನಿಂದ ನೀರನ್ನು ತರಿಸಲಾಯಿತು ಮತ್ತು ಕಾರ್ಯಾಚರಣೆಯನ್ನು ಬೆಂಬಲಿಸಲು ಸ್ಥಳೀಯ ಟ್ಯಾಂಕರ್‌ಗಳನ್ನು ಕರೆಯಲಾಯಿತು. ಎಂಬುವುದಾಗಿ ಪ್ರತ್ಯಕ್ಷದರ್ಶಿ ದರ್ಶನ್ ಹೇಳಿಕೆ ನೀಡಿದ್ದಾರೆ.

- Advertisement -

Related news

error: Content is protected !!