Saturday, June 28, 2025
spot_imgspot_img
spot_imgspot_img

ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ ಕಣ್ಣೀರಿಟ್ಟ ಮಾಜಿ ಶಾಸಕ ಸಂಜೀವ ಮಠಂದೂರು

- Advertisement -
- Advertisement -
This image has an empty alt attribute; its file name is VC_PUC_-1-819x1024.jpg
This image has an empty alt attribute; its file name is indane-gas-2-1024x748.jpg

ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಾನು ಬಹಳ ಸಂತೋಷಪಡುತ್ತೇನೆ ಯಾಕೆಂದರೆ ಒಬ್ಬ ಮಾಜಿ ಶಾಸಕನ ಜೊತೆ ನಾವಿದ್ದೇವೆ ಎನ್ನುವ ಸಂದೇಶ ಕೊಟ್ಟದ್ದಕ್ಕೆ ಕಾರ್ಯಕರ್ತರಿಗೆ ಧನ್ಯವಾದಗಳು. ನಾನೊಬ್ಬ ಕಾರ್ಯಕರ್ತನಾಗಿ ಬೆಳೆದವನು ಪಕ್ಷಕ್ಕೆ ಯಾವುದೇ ಅನ್ಯಾಯ ಆದಾಗ ಎದ್ದು ನಿಂತು ಹೋರಾಟ ಮಾಡಿದವನು, ಪಕ್ಷಕೋಸ್ಕರ ಮೂವತ್ತು ವರ್ಷ ದುಡಿದಿದ್ದೇನೆ.ಯಾವತ್ತೂ ಸೀಟಿಗಾಗಿ ಹೋರಾಟ ಮಾಡಲಿಲ್ಲ. ಪಕ್ಷ ಯಾವ ಜವಾಬ್ದಾರಿ ಕೊಟ್ಟಿತೋ ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ ಎಂದು ಸಭೆಯಲ್ಲಿ ಮಾತನಾಡುತ್ತಾ ಕಣ್ಣೀರಿಟ್ಟರು, ಇವತ್ತೂ ಪಕ್ಷಕ್ಕಾಗಿ ಕಾರ್ಯಕರ್ತರು ಎದ್ದು ನಿಲ್ಲಬೇಕು ಮತ್ತೆ ತಾಲೂಕುಪಂಚಾಯತ್‌, ಜಿಲ್ಲಾ ಪಂಚಾಯತ್‌ಗಳಲ್ಲಿ ಪಕ್ಷ ಗೆಲ್ಲಬೇಕು.

ಇವತ್ತು ಸರ್ಕಾರದ ವೈಫಲ್ಯವನ್ನು ಸಾರ್ವಜನಿಕವಾಗಿ ಹೇಳಬೇಕಿದ್ದರೆ ಬಹುಶಃ ಒಬ್ಬ ಶಾಸಕನ ಕುಮ್ಮಕ್ಕಿನಿಂದ ಅವರ ಬೆಂಬಲಿಗರು ಸಾಮಾಜಿಕ ಜಾಲಾತಾಣಗಳಲ್ಲಿ ಅವಹೇಳನಕಾರಿ ಮಾಡುತ್ತಾರೆ ಎಂದಾದರೆ, ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಕೆಲಸ ಮಾಡಲು ಸಾಧ್ಯವೇ ? ಒಬ್ಬ ಕಾರ್ಯಕರ್ತನ ಮನೆ ಮುಂದೆ ಚೆಂಡೆ ಬಾರಿಸಿದಾಗ ಅದನ್ನು ನಾವು ಕಾನೂನು ರೀತಿಯಲ್ಲಿ ಎದುರಿಸಬೇಕಾಯಿತು. ಅದೇ ರೀತಿ ಮತ್ತೆ ಪುತ್ತುತ್ತೂರಿನಲ್ಲಿ ಗೂಂಡಾಗಿರಿ ಪ್ರವೃತ್ತಿ ಮುಂದುವರಿಯುತ್ತಿದೆ.

ನನ್ನ ಜೀವ ಇರುವ ತನಕ ಗೂಂಡಾಗಿರಿ ಮಾಡಲು ಬಿಡುವುದಿಲ್ಲ ನಾನು ಇನ್ನೊಮ್ಮೆ ಶಾಸಕನಾಗಬೇಕೆಂದು ಬಯಸುವುದಿಲ್ಲ. ಆದರೆ, ಪಾರ್ಟಿಯನ್ನು ಮುಂದಿನ ವಿಧಾನಸಬಾ ಕ್ಷೇತ್ರದಲ್ಲಿ ಗೆಲ್ಲಿಸುವ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಇಂತಹ ಗೂಂಡಾಗಿರಿಯನ್ನು ಮಟ್ಟ ಹಾಕಬೇಕು. ಗೂಂಡಾಗಿರಿಯನ್ನು ಪ್ರೋತ್ಸಾಹ ಮಾಡುವವರನ್ನು ಅವರನ್ನು ಜೈಲಿಗಟ್ಟುವಂತಹ ಕೆಲಸ ಮಾಡಬೇಕು. ಕಳೆದ ಒಂದು ವರ್ಷದಿಂದ ಪುತ್ತೂರಿನಲ್ಲಿ ಸಾಮಾಜಿಕ ಜಾಲಾತಾಣದಲ್ಲಿ ತೇಜೋವಧೆ ಮಾಡುವಂತಹ ಕೆಲಸ ನಿರಂತರ ನಡೆಯುತ್ತಿದೆ ಒಬ್ಬ ಕಾರ್ಯಕರ್ತನಿಗೆ ಅನ್ಯಾಯವಾದಾಗ ನಾವಿದ್ದೇವೆ ಎನ್ನವ ಸಂದೇಶವನ್ನು ಕಾರ್ಯಕರ್ತರು ಕೊಟ್ಟಿದ್ದಾರೆ ಎಂದು ಸಂಜೀವ ಮಠಂದೂರು ಬಿಜಿಪಿ ಸಭೆಯಲ್ಲಿ ಹೇಳಿದರು

- Advertisement -

Related news

error: Content is protected !!