- Advertisement -
- Advertisement -
ವಿಟ್ಲ: ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಿನ್ನೆ ಸಂಜೆ ವೀರಕಂಭ ಗ್ರಾಮದ ಮಜಿ ಶಾಲಾ ಮುಂಭಾಗ ನಡೆದಿತ್ತು.
ಅಪಘಾತದಿಂದ ಗಾಯಗೊಂಡಿದ್ದ ಮಾಣಿಲದ ಮನೋಜ್ ಪೂಜಾರಿ (26) ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಇವರು ಅಮರ್ ಕನ್ಸ್ಟ್ರಕ್ಷನ್ನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಅಪಘಾತದಿಂದಾಗಿ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು . ಲಾರಿ ವಿಟ್ಲ ಬರುತ್ತಿದ್ದು ಈ ವೇಳೆ ಬೈಕ್ ಅನ್ನು ಓವರ್ ಟೇಕ್ ಮಾಡಿದ್ದಾರೆ. ಲಾರಿ ಚಾಲಕನ ತಪ್ಪಿಗೆ ಬೈಕ್ ಸವಾರ ದುರಂತ ಅಂತ್ಯ ಕಂಡಿದ್ದಾನೆ.
- Advertisement -