Monday, May 6, 2024
spot_imgspot_img
spot_imgspot_img

ಉಡುಪಿ: ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಮ್ಯಾನೇಜರ್‌ನಿಂದ ಲಕ್ಷಾಂತರ ರೂ ವಂಚನೆ

- Advertisement -G L Acharya panikkar
- Advertisement -

ಉಡುಪಿ: ಕೆಟಿಎಂ ಬೈಕ್‌ಗಳ ಡೀಲರ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಲಕ್ಷಾಂತರ ರೂ. ಹಣವನ್ನು ದುರುಪಯೋಗಪಡಿಸಿ ಕೊಂಡು ವಂಚಿಸಿರುವ ಬಗ್ಗೆ ವರದಿಯಾಗಿದೆ.

ರೋಶನ್ ಎಂಬಾತ ಸಂಸ್ಥೆಗೆ ವಂಚಿಸಿದ ವ್ಯಕ್ತಿ .

ಗುಂಡಿಬೈಲುನಲ್ಲಿರುವ ಕೆಟಿಎಂ ಬೈಕ್‌ಗಳ ಅಧಿಕೃತ ಡೀಲರ್ ಸಂಸ್ಥೆ ಸಾನ್ವಿ ಟೇಡರ್ಸ್‌ನ ಮಾರಾಟ ವಿಭಾಗದ ಮ್ಯಾನೇಜರ್ ರೋಶನ್ ಕಳೆದ ತಿಂಗಳಿನಲ್ಲಿ ಕೆಲಸಕ್ಕೆ ಬಾರದೆ ಅನಾರೋಗ್ಯ ಕಾರಣ ಗೈರು ಹಾಜರಾಗುತ್ತಿದ್ದ. ಕೆಲಸಕ್ಕೂ ಬಾರದೆ, ಫೋನ್ ಸಂಪರ್ಕಕ್ಕೆ ಸಿಗದಿರುವ ಕಾರಣದಿಂದ ಅನುಮಾನಗೊಂಡು ಸಂಸ್ಥೆಯ ಮ್ಯಾನೇಜ‌ರ್ ಶರತ್ ಟಿ. ಮಾರಾಟದ ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಿದರು.

ಸಂಸ್ಥೆಯ ಮಾರಾಟದ ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಿದಾಗ 2024ರ ಜನವರಿಯಿಂದ ಮಾರ್ಚ್‌ ವರೆಗೆ 18,14,750 ರೂ.ನಷ್ಟು ಹಣವನ್ನು ಗ್ರಾಹಕರಿಂದ ತನ್ನ ಸ್ವಂತ ಖಾತೆಗೆ ವರ್ಗಾಯಿಸಿಕೊಂಡು ಹಾಗೂ ಆ ಹಣವನ್ನು ದುರುಪಯೋಗಪಡಿಸಿಕೊಂಡು ಸಂಸ್ಥೆಗೆ ವಂಚನೆ ಎಸಗಿರುವುದು ಕಂಡುಬಂದಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!