- Advertisement -
- Advertisement -
ಅಹ್ಮದಾಬಾದ್: ಗುಜರಾತಿನ ಗಿರ್ ರಕ್ಷಿತಾರಣ್ಯದಲ್ಲಿ ಸಿಂಹಗಳಿಗೆ ಕಿರುಕುಳ ನೀಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಒಬ್ಬ ಅಪ್ರಾಪ್ತನಾಗಿದ್ದಾನೆ.
ಗಿರ್ ಅರಣ್ಯದ ಪೂರ್ವ ಭಾಗದಲ್ಲಿರುವ ಗಾಥಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿ ಯೂನಿಸ್ ಪಠಾಣ್ ಅಪ್ರಾಪ್ತನೊಬ್ಬನ ಜತೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಸಿಂಹಗಳನ್ನು ನೋಡಿದ್ದ.
ಸಿಂಹಗಳು ಕಣ್ಣಿಗೆ ಬಿದ್ದ ಕೂಡಲೇ ಅವುಗಳಿಗೆ ಕಿರಿ ಕಿರಿಯಾಗುವ ರೀತಿಯಲ್ಲಿ ಬೈಕ್ ನ್ನು ಅತೀ ವೇಗವಾಗಿ ಚಲಾಯಿಸಿದ್ದ, ಕರ್ಕಶವಾಗಿ ಶಬ್ಧ ಮಾಡಿದ್ದ ಎಂದು ಆರೋಪಿಸಲಾಗಿದೆ. ಈ ದೃಶ್ಯಗಳನ್ನು ಸೆರೆ ಹಿಡಿದು ಆರೋಪಿ ಯೂನಿಸ್ ಸಾಮಾಜಿಕ ಜಾಲ ತಾಣದಲ್ಲಿ ಪ್ರಸಾರ ಮಾಡಿದ್ದ.
ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ವನ್ಯ ಜೀವಿಗಳಿಗೆ ಯಾವುದೇ ಕಿರುಕುಳ ನೀಡದಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ಆರೋಪಿಗಳಿಗೆ ಗರಿಷ್ಟ ಏಳು ವರ್ಷ ಶಿಕ್ಷೆ ಮತ್ತು 25000 ರೂಪಾಯಿ ದಂಡ ವಿಧಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
- Advertisement -