Monday, April 29, 2024
spot_imgspot_img
spot_imgspot_img

ಕಂಪನಿಯ ಮ್ಯಾನೇಜರ್‌ ಕಿರುಕುಳ; ಡೆತ್​ನೋಟ್ ಬರೆದಿಟ್ಟು ಕಾರ್ಮಿಕ ಆತ್ಮಹತ್ಯೆ..!

- Advertisement -G L Acharya panikkar
- Advertisement -

ವಾಚ್ ತಯಾರಿಕ ಕಂಪನಿಯ ಮ್ಯಾನೇಜರ್, ಸೂಪರ್ವೈಜರ್ ಕಿರುಕುಳದಿಂದ ಬೇಸತ್ತ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ನಗರದ ಟಿ.ದಾಸರಹಳ್ಳಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ ದಾಸರಹಳ್ಳಿಯಲ್ಲಿ ನೆಲೆಸಿರುವ ಅಂಧ್ರಪ್ರದೇಶದ ಗುಡಿಬಂಡೆ ನಿವಾಸಿ ಗೋವಿಂದ (24) ಎಂದು ಗುರುತಿಸಲಾಗಿದೆ.

ಕಳೆದ ಆರು ವರ್ಷಗಳಿಂದ ಪೀಣ್ಯಾ KDDL ವಾಚ್ ತಯಾರಿಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗೋವಿಂದ ಅವರು ರಾತ್ರಿ RMP ಅಪಾರ್ಟ್ಮೆಂಟ್​ನಲ್ಲಿ ಮೇಂಟೆನೆಂಸ್ ಕೆಲಸ ಮಾಡಿಕೊಂಡು ತಂಗಿದ್ದರು. ಆದರೆ, ರಜೆ ತೆಗೆದುಕೊಂಡಿದ್ದಕ್ಕೆ ಪೀಣ್ಯ ಬಳಿ ಇರುವ KDDL ಕಂಪನಿಯ ಮ್ಯಾನೇಜರ್ ಹಾಗೂ ಸೂಪರ್ವೈಜರ್ ಕಿರುಕುಳ ನೀಡುತ್ತಿದ್ದಾರೆ, ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿ ಡೆತ್ ನೋಟ್ ಬರೆದಿಟ್ಟು ಗೋವಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement -

Related news

error: Content is protected !!