Sunday, May 5, 2024
spot_imgspot_img
spot_imgspot_img

ಜಿಹಾದಿಗಳಿಂದಲೇ ಈ ಕೃತ್ಯ..! ಈ ಬೆದರಿಕೆಗೆ ಎದೆಗುಂದುವ ಮಾತೇ ಇಲ್ಲ – ಹರೀಶ್ ಪೂಂಜಾ

- Advertisement -G L Acharya panikkar
- Advertisement -

ಅಪರಿಚಿತ ಸ್ಕಾರ್ಪಿಯೋ ಕಾರೊಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರ ಕಾರನ್ನು ಹಿಂಬಾಲಿಸಿ, ಅಡ್ಡಗಟ್ಟಿ ಆಯುಧ ತೋರಿಸಿ ಜೀವ ಬೆದರಿಕೆ ಒಡ್ಡಿದ್ದ ಘಟನೆ ನಡೆದಿದೆ.

ಈ ಬಗ್ಗೆ ಶಾಸಕ ಹರೀಶ್ ಪೂಂಜಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಅಧೀಕೃತ ನನ್ನ ಡ್ರೈವರ್‍ ಮಾತ್ರ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಅಧೀಕೃತ ಕಾರನ್ನು ಚೇಸ್ ಮಾಡಿಕೊಂಡು ಬಂದಿದ್ದಾರೆ. ತಕ್ಷಣವೇ ಕಾರಿನ ಡ್ರೈವರ್‍ ನನಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದೇವೆ.

ನಿನ್ನೆ ವಿಮಾನ ನಿಲ್ದಾಣದಿಂದ ಬೆಳ್ತಂಗಡಿಗೆ ಹೋಗುವಾಗ ದಾಳಿ ಮಾಡಿದ್ದಾರೆ. ನಾನು ಖಾಸಗಿ ಕಾರಿನಲ್ಲಿದ್ರೆ ನನ್ನ ಸರ್ಕಾರಿ ಕಾರನ್ನು ಡ್ರೈವರ್ ಚಲಾಯಿಸ್ತಾ ಇದ್ದ . ಅಡ್ಯಾರಿನಿಂದ ಪರಂಗಿಪೇಟೆಯ ತನಕ ಆತ ನಮ್ಮ ನ್ನು ಚೇಸ್ ಮಾಡಿದ್ದ. ನನ್ನ ಸರ್ಕಾರಿ ಕಾರು ನಮ್ಮ ಹಿಂದೆ ಇದ್ದು ಅದಕ್ಕೆ ಮೊದಲು ದಾಳಿಯಾಗಿದೆ. ಬಳಿಕ ತಕ್ಷಣ ಘಟನೆಯ ಬಗ್ಗೆ ದೂರವಾಣಿಯಲ್ಲಿ ಬಂಟ್ವಾಳ ಡಿವೈಎಸ್ಪಿಗೆ ತಿಳಿಸಿದ್ದೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಪರಂಗಿಪೇಟೆಯಲ್ಲಿ ಬ್ಯಾರಿಕೇಡ್ ಹಾಕಿದ್ರು. ಆದ್ರೆ ನಮ್ಮ ಕಾರ್ ಸೈಡ್ ಹಾಕುತ್ತಿದ್ದಂತೆ ಬೇರೆ ಕಾರುಗಳ ಜೊತೆ ಬ್ಯಾರಿಕೇಡ್ ಪಾಸಾಗಿದ್ದಾನೆ.

ಆತ ವೇಗವಾಗಿ ಹೋದ ಕಾರಣ ಪೊಲೀಸರಿಗೆ ಬ್ಯಾರಿಕೇಡ್ ಹಾಕಲು ಆಗಿಲ್ಲ . ಆದರೆ ಪೊಲೀಸರಿಗೆ ವಾಹನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ನಿನ್ನೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ FIR ಆಗಿದೆ.

ಧೈರ್ಯಗೆಡುವಂತಹ ವ್ಯಕ್ತಿ ನಾನಲ್ಲ
ಇನ್ನು ಈ ಕೃತ್ಯ ವ್ಯವಸ್ಥಿತ ಷಡ್ಯಂತ್ರವಾಗಿದೆ. ನಾನು ಹಿಂದುತ್ವದ ಮೇಲೆ ಶಾಸಕನಾಗಿದ್ದು. ಜಿಹಾದಿ ಮಾನಸಿಕತೆಯ, ದೇಶ ವಿರೋಧಿ ಕೃತ್ಯವನ್ನು ವಿರೋಧಿಸಿಕೊಂಡೆ ಬಂದಿದ್ದೇವೆ. ಈ ಕೃತ್ಯದಿಂದ ನಾನು ಧೈರ್ಯ ಕಳೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಿಂದುತ್ವದ ಪರವಾಗಿ ಕೆಲಸ ಮಾಡುತ್ತೇವೆ. ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಲು ಸದಾ ಸಿದ್ಧ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

- Advertisement -

Related news

error: Content is protected !!