Wednesday, April 23, 2025
spot_imgspot_img
spot_imgspot_img

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಪುತ್ತೂರು ಲೀಜನ್ ನೇತೃತ್ವದಲ್ಲಿ ಉಚಿತ ಕಣ್ಣಿನ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

- Advertisement -
- Advertisement -

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ (SCI ) ಪುತ್ತೂರು ಲೀಜನ್ ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವು25/ 2/ 2025 ನೇ ಮಂಗಳವಾರ ಶ್ರೀ ಸಚ್ಚಿದಾನಂದ ಸೇವಾ ಸದನ ವಿನಾಯಕ ನಗರ ದರ್ಬೆ, ಪುತ್ತೂರು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸರಸ್ವತಿ ಕಿಂಡರ್ ಗಾರ್ಟನ್ ಶಿಕ್ಷಕಿ ಮಲ್ಲಿಕಾ ಕುಕ್ಕಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾದ ಶಿಕ್ಷಣ ಸಂಪನ್ಮೂಲ ಕೇಂದ್ರ ಅಧ್ಯಕ್ಷರಾದ ಮೊಹಮ್ಮದ್ ರಫೀಕ್ ದರ್ಬೆ, ಸರಸ್ವತಿ ಕೋಪರೇಟಿವ್ ಬ್ಯಾಂಕ್ ಮ್ಯಾನೇಜರ್ ದೇವಿಪ್ರಸಾದ್, ನೇತ್ರ ಚಿಕಿತ್ಸಾಧಿಕಾರಿ ಶೀಲತಾ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಎಸ್ ಸಿ ಐ ಪುತ್ತೂರು ಅಧ್ಯಕ್ಷರಾದ Snr ಮಲ್ಲಿಕಾ ಜೆ ರೈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. Snr ಅನ್ನಪೂರ್ಣಿಮಾ ಆರ್ ರೈ, Snr ಚಂದ್ರ ಕಾಂತ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಎಸ್ ಸಿ ಐ ಕಾರ್ಯದರ್ಶಿ Snr ರೋಹಿಣಿ ಆಚಾರ್ಯ ಎಲ್ಲರನ್ನೂ ಸ್ವಾಗತಿಸಿದರು. ಕೋಶಾಧಿಕಾರಿ Snr ಸುಮಂಗಲ ಶಣೈ ಕಾರ್ಯಕ್ರಮ ನಿರೂಪಿಸಿದರು. ಎಸ್ ಸಿ ಐ ಎಲ್ಲಾ ಸದಸ್ಯರು ಭಾಗವಹಿಸಿದರು. ನೇತ್ರ ಚಿಕಿತ್ಸಾ ವಿಭಾಗದ PRO ಗಳು,ಸಿಬ್ಬಂದಿಗಳು ಭಾಗವಹಿಸಿದರು.

- Advertisement -

Related news

error: Content is protected !!