- Advertisement -
- Advertisement -




ಬೆಳ್ಳಾರೆ : ಹೃದಯಾಘಾತದಿಂದ ಕೃಷಿಕರೋರ್ವರು ನಿಧನ ಹೊಂದಿದ ಘಟನೆ ನಡೆದಿದೆ.
ಮೃತರನ್ನು ಪ್ರಭಾಕರ ರೈ ಎಂದು ಗುರುತಿಸಲಾಗಿದೆ.
ಮೃತರು ಉತ್ತಮ ರಂಗ ಕಲಾವಿದರಾಗಿದ್ದು, ಹಾಸ್ಯ ಪಾತ್ರಗಳಲ್ಲಿ ಪ್ರೇಕ್ಷಕರ ಮನರಂಜಿಸುತ್ತಿದ್ದರು ಹಾಗೂ ಅಡೂರಿನಲ್ಲಿ ಸ್ಟುಡಿಯೋ ಹೊಂದಿದ್ದು, ಉತ್ತಮ ಛಾಯಾಗ್ರಾಹಕರೂ ಕೂಡ ಆಗಿದ್ದರು.
ಪ್ರಸ್ತುತ ಬೆಳ್ಳಾರೆ ಸಮೀಪದಲ್ಲಿ ಉತ್ತಮ ಕೃಷಿಕರಾಗಿ ಜೀವನ ನಡೆಸುತ್ತಿದ್ದ ಪ್ರಭಾಕರ ರೈಯವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಪುತ್ರಿ, ತಾಯಿ, ಸಹೋದರ ಭಾಸ್ಕರ ರೈ, ಸಹೋದರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿರುತ್ತಾರೆ.
- Advertisement -