Friday, March 29, 2024
spot_imgspot_img
spot_imgspot_img

ಕಾಪು: ಹೃದಯಾಘಾತದಿಂದ CRPF ಯೋಧ ಜಾರ್ಖಾಂಡ್’ನಲ್ಲಿ ಸಾವು!

- Advertisement -G L Acharya panikkar
- Advertisement -

ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದಾಗಿ ಯೋಧರೋರ್ವ ಮೃತರಾದ ಘಟನೆ ನಡೆದಿದೆ. ಮೃತ ಯೋಧರನ್ನು ಕಾಪು ತಾಲೂಕು ಕಳತ್ತೂರು ಚಂದ್ರನಗರ ಕನ್ನಡರಬೆಟ್ಟು ನಿವಾಸಿ ಕರ್ತವ್ಯ ನಿರತ ಸೇನಾ ಯೋಧ ನವೀನ್ ಕುಮಾರ್ ಕರ್ಕಡ (50) ಎನ್ನಲಾಗಿದೆ. ಕಳೆದ 29 ವರ್ಷಗಳಿಂದ ಸಿಐಎಸ್‌ಎಫ್ ಯೋಧನಾಗಿ ಸೇನಾ ಕರ್ತವ್ಯ ನಿರತರಾಗಿದ್ದ ಅವರು ಮುಂದಿನ ವರ್ಷದಲ್ಲಿ ಕರ್ತವ್ಯದಿಂದ ನಿವೃತ್ತಿ ಹೊಂದುವವರಿದ್ದರು.

ಇನ್ನು ಜಾರ್ಖಂಡ್ ಸೇನಾ ನೆಲೆಯಿಂದ, ಕೊಲ್ಕತ್ತಾ, ಮುಂಬಯಿ ಮಾರ್ಗದ ಮೂಲಕವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಮೃತದೇಹವನ್ನು ತರಲಾಗುತ್ತಿದ್ದು, ಭಾನುವಾರ ಸಂಜೆ ಪಾದೂರು ಚರ್ಚ್ ನಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!