- Advertisement -
- Advertisement -
ಚಲಿಸುತ್ತಿದ್ದ ವಾಹನದಲ್ಲೇ ಹೃದಯಾಘಾತವಾಗಿ ಚಾಲಕ ಸಾವನ್ನಪ್ಪಿರುವ ದಾರುಣ ಘಟನೆ ಕೊಡಗಿನ ವಿರಾಜಪೇಟೆ ಸಮೀಪದ ಬಿಟ್ಟಂಗಾಲ ಬಳಿ ನಡೆದಿದೆ.
ರವಿಕುಮಾರ್ (28) ಮೃತ ದುರ್ದೈವಿ ಯುವಕನಾಗಿದ್ದಾನೆ.
ಈತ ವಿರಾಜಪೇಟೆ ಹೊರವಲಯದ ಬಿಟ್ಟಾಂಗಲ ಬಳಿಯ ಪೆಗ್ಗರಿಕಾಡು ನಿವಾಸಿಯಾಗಿದ್ದು, ಪಿಕಪ್ ವಾಹನ ಚಲಾಯಿಸಿಕೊಂಡು ಗೋಣಿಕೊಪ್ಪದಿಂದ ವಿರಾಜಪೇಟೆ ಕಡೆ ಬರುತ್ತಿದ್ದನು.
ಈ ವೇಳೆ ಪಿಕ್ ಅಪ್ ವಾಹನದಲ್ಲಿ ತೆರಳುತ್ತಿದ್ದಾಗ ಜೋರಾದ ಎದೆನೋವು ಕಾಣಿಸಿಕೊಂಡಿದೆ. ವಿರಾಜಪೇಟೆ ಕಡೆ ಬರುತ್ತಿದ್ದ ಸಂದರ್ಭ ಹೃದಯಾಘಾತವಾಗಿ ರವಿಕುಮಾರ್ ತನ್ನ ವಾಹನದಲೇ ಮೃತಪಟ್ಟಿದ್ದಾನೆ.
- Advertisement -