- Advertisement -
- Advertisement -
ಹಿಂದು ಜಾಗರಣ ವೇದಿಕೆ ಕಡೇಶಿವಾಲಯ ವತಿಯಿಂದ ಈ ಬಾರಿಯ ಗಣೇಶ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಸ್ವಚ್ಚ ಜಾಗರಣ ಕಾರ್ಯಕ್ರಮದಿಂದ ಗ್ರಾಮದ ಏಳು ಬಸ್ಸು ತಂಗುದಾಣಗಳನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಬೆಳಗ್ಗೆ 10 ರಿಂದ ಅಪರಾಹ್ನ 2.30 ರವರೆಗೆ ಈ ಸ್ವಚ್ಚತಾಕಾರ್ಯ ಜರಗಿತು.
ಪ್ರಧಾನಿ ನರೇಂದ್ರಮೋದೀಜಿಯವರ ಸ್ವಚ್ಚಭಾರತ ಕನಸಿನಡಿಯಲ್ಲಿ ಸುಮಾರು ಮೂವತ್ತಕ್ಕೂ ಅಧಿಕ ಕಾರ್ಯಕರ್ತರು ಬಸ್ಸು ನಿಲ್ದಾಣಗಳನ್ನು ಸ್ವಚ್ಚಗೊಳಿಸಿದರು.
ಹಿಂದು ಜಾಗರಣ ವೇದಿಕೆಯ ಪ್ರಮುಖರಾದ ಗಣರಾಜ್ ಭಟ್ ಕೆದಿಲ, ಕಡೇಶಿವಾಲಯ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
- Advertisement -