

ಹಿರಣ್ಯ: ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಪುನರ್ ಪ್ರತಿಷ್ಠೆ, ಧರ್ಮನೇಮೋತ್ಸವ, ಗಡಿಪ್ರಧಾನ ಕಾರ್ಯಕ್ರಮ ಏಪ್ರಿಲ್ 10 ರಿಂದ 15 ರವರೆಗೆ ನಡೆಯಲಿದೆ.

ದಿನಾಂಕ: 10-4-2025ನೇ ಗುರುವಾರ ಬೆಳಿಗ್ಗೆ 8:00ರಿಂದ ಮೈಸಂದಾಯ ಪರಿವಾರ ದೈವಗಳ ಸನ್ನಿಧಿಯಲ್ಲಿ ಗಣಪತಿ ಹೋಮ, ವಾರ್ಷಿಕ ದೈವಗಳ ಕಲಶಾಭಿಷೇಕ ಮತ್ತು ವಾರ್ಷಿಕ ತಂಬಿಲ ಕಾರ್ಯಕ್ರಮ ನಡೆಯಲಿದೆ. ಕಂಬಳಗದ್ದೆ ಗುತ್ತು ತರವಾಡು ಮನೆಯಲ್ಲಿ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಮುಡಿಪು ಪೂಜೆ, ದೈವಗಳಿಗೆ ವಾರ್ಷಿಕ ಕಲಶಾಭಿಷೇಕ ಹಾಗೂ ತಂಬಿಲ ಕಾರ್ಯಕ್ರಮ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5:30ರಿಂದ ನಾಗದೇವರ ಮತ್ತು ಅಣ್ಣಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಸ್ವಸ್ತಿ ಪುಣ್ಯಾಹವಾಚನ, ಖನನಾದಿ ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ಅಸ್ತ್ರಕಲಶ ಪೂಜೆ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜೆ, ವಾಸ್ತುಬಲಿ, ಅಧಿವಾಸ ಪ್ರಕ್ರಿಯೆಗಳು ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ: 11-4-2025ನೇ ಶುಕ್ರವಾರ ಬೆಳಿಗ್ಗೆ 7:30ರಿಂದ ಬೆಳಿಗ್ಗೆ 9:30ರಿಂದ 10:20ರವರೆಗೆ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಅಣ್ಣಪ್ಪ ಸ್ವಾಮಿ ನಾಗದೇವರು, ರಕ್ತೇಶ್ವರಿ, ಮತ್ತು ಗುಳಿಗ ದೈವ ದೇವರುಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಪ್ರಾರ್ಥನೆ ಮಹಾಪೂಜೆ ಅನ್ನಪ್ರಸಾದ ನಡೆಯಲಿದೆ. ಸಂಜೆ 3.30 ರಿಂದ ಶ್ರೀ ಪಂಚಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬಾಯಾರು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30 ಕ್ಕೆ ಸರಿಯಾಗಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ಬಯಲಾಟ ನಡೆಯಲಿದೆ.

ಏ. 12 ನೇ ಶುಕ್ರವಾರದಂದು ಶ್ರೀ ದೇವಿ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಹವಾಚನ, ಮಹಾಗಣಪತಿ ಹೋಮ, ಕಲಶ ಪೂಜೆ, ಕಲಶಾಂಗ ಹೋಮ, ಚಂಡಿಕಾ ಶಾಂತಿ, ಶ್ರೀ ವಿಷ್ಣು ದ್ವಾದಶಾಕ್ಷರೀ ಹೋಮ, ಪಂಚಾಮೃತಾಭಿಷೇಕ, ಕಲಶಾಭಿಷೇಕ, ಅಲಂಕಾರ, ಮಹಾ ಮಂಗಳಾರತಿ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ : 3:30ರಿಂದ 5:30ರ ತನಕ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ ಪೆರೋಡಿ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 5.30 ರಿಂದ ದೇವಿ ಸನ್ನಿಧಿಯಲ್ಲಿ ದೀಪಾರಾಧನೆ, ಹೂವಿನ ಪೂಜೆ, 6:30 ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.

13-04-2025ನೇ ಆದಿತ್ಯವಾರ ಸಂಕ್ರಮಣದ ಅಂಗವಾಗಿ ದೇವಿ ಸನ್ನಿಧಿಯಲ್ಲಿ ನವಕ ಕಲಶಾಭಿಷೇಕ, ಬೆಳಗ್ಗಿನ ಪೂಜೆ, ನಾಗ ಬನದಲ್ಲಿ ವಾರ್ಷಿಕ ತಂಬಿಲ ಸೇವೆ, ಮೆಹಿಷಂತಾಯಾದಿ ದೈವಗಳ ಸನ್ನಿಧಿಯಲ್ಲಿ ತಂಬಿಲ, ದೇವಿ ಸನ್ನಿಧಿಯಲ್ಲಿ ಮಧ್ಯಾಹ್ನದ ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಗಂಟೆ 2:30ಕ್ಕೆ ಸರಿಯಾಗಿ ತರವಾಡು ಮನೆಯ ದೈವಗಳ ಭಂಡಾರ ಇಳಿಸಿ ಕೊಡಿಯಡಿಯಲ್ಲಿ ಭಂಡಾರ ಏರಿಸುವುದು. 3:00ಕ್ಕೆ ಸರಿಯಾಗಿ ಜಾಗದ ವರ್ಣರ ಪಂಜುರ್ಲಿಗೆ ಕೋಲ, 6:30 ಕ್ಕೆ ತರವಾಡು ಮನೆಯ ದೈವಗಳಿಗೆ ಸಂಕ್ರಮಣದ ತಂಬಿಲ, ನಡೆಯಲಿದೆ. 7:00 ಗಂಟೆಯಿಂದ ದೇವಿ ಸನ್ನಿಧಿಯಲ್ಲಿ ಸಂಕ್ರಮಣದ ಪೂಜೆ, ದೀಪಾರಾಧನೆ, ಭಜನೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9:30 ರಿಂದ ತರವಾಡಿನ ಕೊರತಿ ದೈವಕ್ಕೆ ಕೋಲ, ರಾತ್ರಿ 11:30ರಿಂದ : ಧರ್ಮದೈವ ಪಂಜುರ್ಲಿ ಮತ್ತು ಧರ್ಮದೇವತೆ ಕಲ್ಲುರ್ಟಿಗೆ ಕೋಲ ರಾತ್ರಿ ಗಂಟೆ 3:00ರಿಂದ ಗುಳಿಗ ದೈವದ ಕೋಲ ನಡೆಯಲಿದೆ.

ದಿನಾಂಕ 14-04-2025ನೇ ಸೋಮವಾರ ಬೆಳಗ್ಗೆ ಗಂಟೆ 9:30ಕ್ಕೆ ಸರಿಯಾಗಿ ಮಹಿಷಂತಾಯಾದಿ ಪರಿವಾರ ದೈವಗಳ – ಸನ್ನಿಧಿಯಲ್ಲಿ ತಂಬಿಲ ಸೇವೆ, ತದನಂತರ ತರವಾಡು ಮನೆಗೆ ಭಂಡಾರ ಹೊರಡುವುದು. ದೈವಗಳ ಕೊಡಿಯಡಿಯಲ್ಲಿ ಭಂಡಾರ ಏರುವುದು. ಮನೆಯ ಚಾವಡಿಯಲ್ಲಿ ಮಲರಾಯಿ ದೈವಕ್ಕೆ ತಂಬಿಲ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಗಂಟೆ 3:00ಕ್ಕೆ: ಸರಿಯಾಗಿ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳು ಮಣಿಪಾಲ ಉಪನ್ಯಾಸಕರು ಶ್ರೀಮತಿ ಅರ್ಪಿತ ಪ್ರಶಾಂತ ಶೆಟ್ಟಿ ಕದಪಾಡಿ ಇವರು ಗಡಿ ಪ್ರಧಾನ ಮಹತ್ವದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಪರಾಹ್ನ ಗಂಟೆ 3:30ಕ್ಕೆ: ಗಣ್ಯರ ಹಾಗೂ ಭಗವದ್ಭಕ್ತರ ಸಮ್ಮುಖದಲ್ಲಿ ಮಲರಾಯಿ ದೈವಕ್ಕೆ ಸರಿಯಾಗಿ ಧರ್ಮನೇಮೋತ್ಸವದೊಂದಿಗೆ ಗಡಿ ಪ್ರಧಾನ ಕಾರ್ಯಕ್ರಮ ದೈವದ ಸಿರಿಮುಡಿ ಗಂಧ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6:30ರಿಂದ ಮೈಸಂದಾಯ ದೈವಕ್ಕೆ ನೇಮೋತ್ಸವ, ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 9:30ರಿಂದ ಧೂಮಾವತಿ ದೈವಕ್ಕೆ ನೇಮೋತ್ಸವ, ರಾತ್ರಿ ಗಂಟೆ 11:00ರಿಂದ ರಕೇಶ್ವರಿ ದೈವಕ್ಕೆ ನೇಮೋತ್ಸವ ನಡೆಯಲಿದೆ. ರಾತ್ರಿ ಗಂಟೆ 2:00ರಿಂದ ಪಿಲಿಚಾಮುಂಡಿ ದೈವಕ್ಕೆ ನೇಮೋತ್ಸವ ಬಳಿಕ ತರವಾಡು ಮನೆಯಿಂದ ದೈವಗಳ ಭಂಡಾರದ ಮನೆಗೆ ಭಂಡಾರ ಹೊರಡುವುದು, ಮತ್ತು ದೈವಗಳಿಗೆ ಶುದ್ಧ ತಂಬಿಲ ಸೇವೆ ನಡೆಯಲಿದೆ.

ದಿನಾಂಕ 15-04-2025ನೇ ಮಂಗಳವಾರ ಅಪರಾಹ್ನ 2:30ರಿಂದ ತರವಾಡು ಮನೆಯ ಧರ್ಮದೈವ, ಧರ್ಮದೇವತೆ ಪರಿವಾರ ದೈವಗಳಿಗೆ ಕುರಿತಂಬಿಲ ಸೇವೆ ಮತ್ತು ಕಾರ್ನವರಿಗೆ ಅಗೆಲು ಸೇವೆ ನಡೆಯಲಿದೆ.
