- Advertisement -
- Advertisement -
ಹೊನ್ನಾವರ: ಮೀನುಗಾರಿಕೆಗೆ ತೆರಳಿದ್ದ ಬೋಟ್ ತಾಂತ್ರಿಕ ದೋಷದಿಂದ ಮುಳುಗಡೆಯಾಗಿ 15ಕ್ಕೂ ಹೆಚ್ಚು ಮೀನುಗಾರರನ್ನು ರಕ್ಷಣೆ ಮಾಡಿರುವ ಘಟನೆ ಹೊನ್ನಾವರದ ಅಳಿವೆ ಬಳಿ ಅರಬ್ಬಿ ಸಮುದ್ರದಲ್ಲಿ ನಡೆದಿದೆ.
ಸೆಂಟ್ ಅಂತೋನಿ ಎಂಬ ಬೋಟ್ ಮೀನುಗಾರಿಕೆಗೆ ತೆರಳಿದ್ದಾಗ ಬೋಟ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅಲೆಗಳ ರಭಸಕ್ಕೆ ಮುಳುಗಡೆಯಾಗಿದ್ದು, ತಕ್ಷಣ ಬೋಟ್ನಲ್ಲಿದ್ದ ಸುಮಾರು15 ಮೀನುಗಾರರನ್ನು ಇತರೆ ಬೋಟ್ಗಳ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಬೋಟ್ನಲ್ಲಿ ಬಲೆ ಸೇರಿದಂತೆ ಇನ್ನಿತರ ವಸ್ತುಗಳು ಸಮುದ್ರಪಾಲಾಗಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಫೆಲಿಕ್ಸ್ ಲೂಫಿಸ್ಸೇಂಟ್ ಎಂಬವರಿಗೆ ಸೇರಿದ ಬೋಟ್ ಆಗಿದೆ.
- Advertisement -