Friday, March 29, 2024
spot_imgspot_img
spot_imgspot_img

ಆಸ್ಪತ್ರೆಯಲ್ಲಿನ ಬೆಡ್ ಗಾಗಿ ರೋಗಿಗಳ ಕಿತ್ತಾಟ!

- Advertisement -G L Acharya panikkar
- Advertisement -

ಲಕ್ನೋ: ಆಸ್ಪತ್ರೆಯ ಹಾಸಿಗೆಗಾಗಿ ಇಬ್ಬರು ರೋಗಿಗಳು ಕಿತ್ತಾಡಿಕೊಂಡಿದ್ದಾರೆ. ಇಬ್ಬರ ಜಗಳದಲ್ಲಿ ಒಬ್ಬನು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಶಹಜಾನ್‍ಪುರದ ಆಸ್ಪತ್ರೆಯಲ್ಲಿ ನಡೆದಿದೆ.

ಹಂಸರಾಜ ಮೃತ ವ್ಯಕ್ತಿ. ಆರೋಪಿಯನ್ನು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಈ ಇಬ್ಬರು ರೋಗಿಗಳಿಗೆ 21, 27ನೇ ಬೆಡ್ ನೀಡಲಾಗಿತ್ತು. ಆದರೂ ಬೆಡ್‍ಗಾಗಿ ಕಿತ್ತಾಡಿಕೊಂಡು ಒಬ್ಬ ಪ್ರಾಣವನ್ನೇ ಬಿಟ್ಟಿದ್ದಾನೆ.

ಅಬ್ದುಲ್ ಬೆಡ್‍ನಿಂದ ಎದ್ದು ಮುಖವನ್ನು ತೊಳೆಯಲು ಹೋಗಿದ್ದನು. ತನ್ನ ಬೆಡ್‍ಗೆ ಹೋಗುವುದನ್ನು ಮರೆತು ಹಂಸರಾಜನ ಬೆಡ್‍ಗೆ ಹೋಗಿ ಮಲಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಇಬ್ಬರ ಕಿತ್ತಾಟದಲ್ಲಿ ಅಬ್ದುಲ್ ಹಂಸರಾಜ್‍ನನ್ನು ಎತ್ತಿಹಾಕಿದ್ದಾನೆ. ಈ ವೇಳೆ ಹಂಸರಾಜ್ ಪ್ರಾಣ ಬಿಟ್ಟಿದ್ದಾನೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಬ್ದುಲ್ ರೆಹಮಾನ್ ಮತ್ತು ಈತನ ತಂದೆಯನ್ನು ಬಂಧಿಸಿದ್ದಾರೆ. ಅಬ್ದುಲ್ ಮಾನಸಿಕ ಅಸ್ವಸ್ಥ ಎಂದು ಪೊಲೀಸರಿಗೆ ವೈದ್ಯರು ತಿಳಿಸಿದ್ದಾರೆ.

- Advertisement -

Related news

error: Content is protected !!