Tuesday, April 30, 2024
spot_imgspot_img
spot_imgspot_img

ಇಡ್ಕಿದು: (ಎ- 3) ನೇರ್ಲಾಜೆ ಶ್ರೀ ಲಕ್ಷ್ಮೀ ವೆಂಕಟೇಶ್ವರ ನಿಲಯದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

- Advertisement -G L Acharya panikkar
- Advertisement -

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವು ಏ. 3 ರಂದು ಬುಧವಾರ ಸಂಜೆ 5:45 ರಿಂದ ಇಡ್ಕಿದು ಗ್ರಾಮದ ನೇರ್ಲಾಜೆ ಶ್ರೀ ಲಕ್ಷ್ಮೀ ವೆಂಕಟೇಶ್ವರ ನಿಲಯದ ಮನೆಯ ವಠಾರದಲ್ಲಿ ಹಾಕಿರುವ ಭವ್ಯ ರಂಗಮಂಟಪದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಶ್ರೀ ಕೆ. ವೆಂಕಟರಮಣ ಅಸ್ರಣ್ಣರು ಅನುವಂಶಿಕ ಅರ್ಚಕರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲು ಇವರು ಭಾಗವಹಿಸಲಿದ್ದಾರೆ.

ಸಂಜೆ 5:45ಕ್ಕೆ ಮೇಳದ ದೇವರ ಚೌಕಿ ಪೂಜೆ ಮತ್ತು ರಾತ್ರಿ ಗಂಟೆ 8:30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ಎಸ್‌.ಎಲ್‌.ವಿ ಬೂಕ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನ ಮಾಲಕರಾದ ದಿವಾಕರ ದಾಸ್ ರವರ ನೂತನ ಮನೆಯ ಗ್ರಹಪ್ರವೇಶದ ಸಲುವಾಗಿ ಅದೇ ದಿನ ರಾತ್ರಿ ಕಟೀಲು ಕ್ಷೇತ್ರದ ಯಕ್ಷಗಾನ ನಡೆಯಲಿದೆ. ಮತ್ತು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಸೇವಡೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತ ಭಾಂದವರು ಪಾಲ್ಗೊಳ್ಳುವಂತೆ ಮನೆಯವರಾದ ರಾಜೀವಿ ಮಾತು ಸುರೇಶ್ ದಾಸ್, ಮೀರಾ ಕೇಶವದಾಸ್ ಹಾಗೂ ಹೇಮಾವತಿ ಮಾತು ದಿವಾಕರ್ ದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!