ಪುತ್ತೂರು: ಅಕ್ರಮವಾಗಿ ಮದ್ಯ ಶೇಖರಣೆ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾಗ, ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ ಘಟನೆ ಪುತ್ತೂರು ತಾಲೂಕು, ಇರ್ದೆ ಗ್ರಾಮದ ಮೇರ್ವೆ ಎಂಬಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಹುಕ್ರಪ್ಪ ಪೂಜಾರಿ ಎಂದು ಗುರುತಿಸಲಾಗಿದೆ.
ದಿನಾಂಕ 22-03-2024 ರಂದು ಸಂಜೆ ಪುತ್ತೂರು ತಾಲೂಕು, ಇರ್ದೆ ಗ್ರಾಮದ ಮೇರ್ವೆ ಎಂಬಲ್ಲಿ ಹುಕ್ರಪ್ಪ ಪೂಜಾರಿ ತನ್ನ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಅಕ್ರಮವಾಗಿ ಮದ್ಯ ಶೇಖರಣೆ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾಗ, ದಾಳಿ ನಡೆಸಿದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಜಂಬೂರಾಜ್ ಬಿ ಮಹಾಜನ್ ಹಾಗೂ ಸಿಬ್ಬಂದಿಗಳು, ಆರೋಪಿ ಹುಕ್ರಪ್ಪ ಪೂಜಾರಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ದಾಳಿ ನಡೆಸಿರುವ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇತರೆ 3 ರಿಂದ 4 ಜನರು ಪರಾರಿಯಾಗಿದ್ದಾರೆ. ಆರೋಪಿಯ ಬಳಿ, ತಲಾ 90 ML ನ ಮದ್ಯ ತುಂಬಿದ 49 ಸ್ಯಾಚೆಟ್ಗಳು, ( ಒಟ್ಟು 4.410 ಲೀಟರ್ ಹಾಗೂ ಮೌಲ್ಯ ರೂಪಾಯಿ 1,960.49) ಪತ್ತೆಯಾಗಿದೆ ಹಾಗೂ ಮದ್ಯ ಮಾರಾಟದಿಂದ ಗಳಿಸಿದ 100/- ರೂ ನಗದು ದೊರಕಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 43-2024 ಕಲಂ KARNATAKA EXCISE ACT, 1965 (U/s-32,34) ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.