Friday, March 29, 2024
spot_imgspot_img
spot_imgspot_img

ವಾದ್ಯ ವಾದಕರ ಸಂಘ, ಬಂಟ್ವಾಳ, ದ.ಕ ಇದರ ಉದ್ಘಾಟನಾ ಸಮಾರಂಭ ಹಾಗೂ ಪದಾಧಿಕಾರಿಗಳ ಆಯ್ಕೆ

- Advertisement -G L Acharya panikkar
- Advertisement -

ವಾದ್ಯ ವಾದಕರ ಸಂಘ, ಬಂಟ್ವಾಳ, ದ.ಕ ಇದರ ಉದ್ಘಾಟನಾ ಸಮಾರಂಭ ಹಾಗೂ ಪದಾಧಿಕಾರಿಗಳ ಆಯ್ಕೆಯು ತಾ:27/09/2020ರಂದು ಸುಮಂಗಲ ಕಲ್ಯಾಣ ಮಂಟಪದಲ್ಲಿ ಜರುಗಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕಶೆಕೋಡಿಸೂರ್ಯನಾರಾಯಣ ಭಟ್ ವಹಿಸಿದ್ದರು.ಸಂಘದ ಉದ್ಘಾಟನೆಯನ್ನು’ತುಳುನಾಡ ಗಾನಗಂಧರ್ವ’ ದ.ಕ ಜಿಲ್ಲಾ ರಾಜ್ಯೋತ್ಸವ ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತ ಶ್ರೀ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಶ್ರೀ ಸುಂದರ ಜೋಗಿ ಪೊರ್ಕೋಡಿ,ಮಂಗಳೂರು
(ಹಿರಿಯ ಸ್ಯಾಕ್ಸಫೋನ್ ಮತ್ತು ಕ್ಲಾರಿಯೋನೆಟ್ ಕಲಾವಿದರು)
ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.


ವೇದಿಕೆಯಲ್ಲಿ ಶ್ರೀ ಹರೀಶ್ ಸಂಕೇಶ(ವಕೀಲರು)ಗೌರವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ವಾದ್ಯ ಕಲಾವಿದರನ್ನು ಗೌರವಿಸಲಾಯಿತು. ಹಾಗೂ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಿಸಲಾಯಿತು.ಕರಿಷ್ಮಾ ಜಗದೀಶ್ ಸ್ವಾಗತಿಸಿದರು.
ರಂಜಿತ್ ಕಂಬಳಬೆಟ್ಟು ಪ್ರಾಸ್ತಾವಿಕ ಭಾಷಣ ಮಾಡಿದರು.
ಹರ್ಷಿತ ರಮೇಶ್ ಮತ್ತು ರಂಜಿತ್ ನಂದಾವರ ಕಾರ್ಯಕ್ರಮವನ್ನು ನಿರ್ವಹಿಸಿದರು. ಗೌರಿಲಕ್ಷ್ಮಿ.ಜಿ ವಂದಿಸಿದರು.

- Advertisement -

Related news

error: Content is protected !!