
ನಿರ್ಮಾಪಕರು ವಸಂತ್ ರೆಡ್ಡಿ ಹಾಗೂ ನವೀನ್ ಕುಮಾರ್ ಬೆಂಗಳೂರು ನಿರ್ದೇಶನದಲ್ಲಿ ಅಭಿಷೇಕ್ ಕಲ್ಕಿ ಬೆಂಗಳೂರು ಸಂಗೀತ ನಿರ್ದೇಶನದಲ್ಲಿ ಕರಾವಳಿಯ ಸಾಹಿತ್ಯಗಾರ ಪ್ರಶಾಂತ್ ಎಂ ಟಿ ವಿಟ್ಲ ಇವರ ಸಾಹಿತ್ಯದಲ್ಲಿ ಸಂಗೀತ ಮಾಂತ್ರಿಕ ವಿಜಯ್ ಪ್ರಕಾಶ್ ರ ಗಾಯನದಲ್ಲಿ ಮೂಡಿಬರಲಿರುವ ದೇಶಭಕ್ತಿಗೀತೆ ವಂದೇ ಮಾತರಂ ಇದೇ ಬರುವ 15ರ ಸ್ವಾತಂತ್ರ್ಯ ದಿನದಂದು ಆನಂದ್ ಆಡಿಯೋ ದಲ್ಲಿ ಬಿಡುಗಡೆಯಾಗಲಿದೆ…



ಪ್ರಶಾಂತ್ ಮೂಲತಃ ವಿಟ್ಲದ ಕಡಂಬು ನವರು ತಿಮ್ಮ ಹಾಗೂ ಕಲ್ಯಾಣಿ ದಂಪತಿಗಳ ದ್ವಿತೀಯ ಪುತ್ರನಾಗಿ ಬಡತನದಲ್ಲಿ ಹುಟ್ಟಿದ ಇವರು ಇಂದು ಒಬ್ಬ ಯಶಸ್ವಿ ಕಲಾವಿದನಾಗಿ ಕಲಾಕ್ಷೇತ್ರದಲ್ಲಿ ಒಂದೊಂದೆ ಸಾಧನೆಯನ್ನು ಮಾಡುತ್ತಿದ್ದಾರೆ, ಈ ಹಿಂದೆ ಹಲವಾರು ವೇದಿಕೆಗಳಲ್ಲಿ ಗಾಯಕರಾಗಿ, 100 ಕ್ಕೂ ಅಧಿಕ ಹಾಡುಗಳನ್ನು ಬರೆದಿದ್ದಾರೆ ಜೊತೆಗೆ ಜಯಕಿರಣ, ಕಾರವಲ್, ಬೆಂಗಳೂರಿನ ಮಾನಸ, ಸವಿ ಸವಿ ಪ್ರೀತಿ, ಮಂಗಳ ಮುಂತಾದ ಮಾಸಿಕ ಪತ್ರಿಕೆಯಲ್ಲಿ ಇವರ ನೂರಾರು ಕವನಗಳು ಈಗಾಗಲೇ ಪ್ರಕಟಗೊಂಡಿದ್ದು, ಹಲವಾರು ಲೇಖನಗಳು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು ಒಬ್ಬ ಗಾಯಕನಾಗಿ, ಸಾಹಿತ್ಯ ಗಾರನಾಗಿ , ಬರಹಗಾರನಾಗಿ ಜೊತೆಗೆ ಹಲವಾರು ಕಿರುಚಿತ್ರಗಳಲ್ಲಿ ನಟಿಸಿರುವ ಇವರ ಮುಂದಿನ ಜೀವನ ಯಶಸ್ವಿಯಾಗಿರಲಿ.
