Monday, April 29, 2024
spot_imgspot_img
spot_imgspot_img

ಅನೈತಿಕ ಸಂಬಂಧಕ್ಕೆ ಅಡ್ಡಿ; ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಲೆಗೈದ ಪತ್ನಿ..!

- Advertisement -G L Acharya panikkar
- Advertisement -

ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯ ಎಪಿಎಂಸಿ-ಮಾರಡಗಿ ರೋಡ್‌ನಲ್ಲಿ ನಡೆದಿದೆ.

ಕೊಲೆಮಾಡಿದ ಮಹಿಳೆ ಮಂಜುಳಾ ಹಾಗೂ ರಿಯಾಜ್ ಅಹ್ಮದ್, ಕೊಲೆಯಾದ ವ್ಯಕ್ತಿ (ಪತಿ) ಬಂಜಾರ ಕಾಲೋನಿ ನಿವಾಸಿ ಚಂದ್ರಶೇಖರ ಲಮಾಣಿ (40)

ಕಳೆದ ಜನವರಿ 10 ರಂದು ಎಪಿಎಂಸಿ ಮಾರಡಗಿ ರೋಡ್‌ನಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ನವನಗರ ಪೊಲೀಸರು ಮೃತನಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದರು. ಅತ್ತ ಪತ್ನಿ ಮಂಜುಳಾ ಗಂಡನ ಸಾವಿನ ಬಗ್ಗೆ ಸಂಶಯ ಇದೆ ಎಂದು ನವನಗರ ಪೊಲೀಸ್ ಠಾಣೆಗೆ ತೆರಳಿ ದೂರು‌ ನೀಡಿದ್ದಳು‌. ಪೊಲೀಸರು ಎಲ್ಲಾ ಆ್ಯಂಗಲ್‌ನಲ್ಲಿ ತನಿಖೆ ಮಾಡಿದ್ದಾರೆ. ಬಳಿಕ ಈ ಕೊಲೆಗೆ ಕಾರಣ ಯಾರು ಎಂಬುದನ್ನ ಪತ್ತೆಹಚ್ಚಿದ್ದಾರೆ. ಪತಿ ಚಂದ್ರಶೇಖರ ಲಮಾಣಿಯನ್ನು ಪತ್ನಿ ಮಂಜುಳ ಮತ್ತು ಪ್ರಿಯಕರ ರಿಯಾಜ್ ಅಹ್ಮದ್ ಕೊಲೆ ಮಾಡಿದ್ದಾರೆ. ಅನೈತಿಕ ಸಂಬಂಧಕ್ಕೆ ವಿರೋಧ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಸತ್ಯ ಕಕ್ಕಿದ್ದಾರೆ.

ನಮ್ಮಿಬ್ಬರ ಅನೈತಿಕ ಸಂಬಂಧ ಇತ್ತು. ಈ ವಿಷಯ ಗಂಡನಿಗೆ ಗೊತ್ತಾದ ನಂತರ ನನಗೆ ಕಿರುಕುಳ ನೀಡುತ್ತಿದ್ದ. ಅಲ್ಲದೇ ನಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರ ಕೊಲೆ ಮಾಡಿದ್ದಾಗಿ ಮಂಜುಳ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾಳೆ. ಅತ್ತ ನಾನೇ ಚಂದ್ರಶೇಖರನನ್ನ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದೇನೆ. ಕಳೆದ ಐದು ವರ್ಷಗಳಿಂದ ನಮ್ಮಿಬ್ಬರ ನಡುವೆ ಅನೈತಿಕ ಸಂಬಂಧ ಇತ್ತು. ಅದಕ್ಕೆ ಚಂದ್ರಶೇಖರ ವಿರೋಧ ಮಾಡ್ತಾ ಇದ್ದ. ಆದ್ದರಿಂದ ಕೊಲೆ ಮಾಡದ್ದೇನೆ ಎಂದು ರಿಯಾಜ್ ಅಹ್ಮದ್ ನಿಜಾಂಶ ಹೇಳಿದ್ದಾನೆ. ಸದ್ಯ ಪತ್ನಿಯ ಅನೈತಿಕ ಸಂಬಂಧದಿಂದ ಗಂಡ ಕೊಲೆಯಾದ್ರೆ, ಮಾಡಬಾರದ ತಪ್ಪು ಮಾಡಿ ಪತ್ನಿ ಹಾಗೂ ಪ್ರಿಯಲ ಜೈಲು ಪಾಲಾಗಿದ್ದಾರೆ. ಇವರ ಈ ಕೃತ್ಯಕ್ಕೆ ಮೂರು ಮಕ್ಕಳು ಅನಾಥವಾಗಿವೆ.

- Advertisement -

Related news

error: Content is protected !!