Friday, April 26, 2024
spot_imgspot_img
spot_imgspot_img

ಜೆ ಸಿ ಐ ಜೋಡುಮಾರ್ಗ ನೇತ್ರಾವತಿ ಇದರ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ!!

- Advertisement -G L Acharya panikkar
- Advertisement -

ಬಂಟ್ವಾಳ: ಜೆ ಸಿ ಐ ಜೋಡುಮಾರ್ಗ ನೇತ್ರಾವತಿ ಇದರ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿ.17 ರಂದು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು. 2020ನೇ ಸಾಲಿನ ಅಧ್ಯಕ್ಷರಾದ ಶ್ರೀನಿಧಿ ಭಟ್ ತನ್ನ ಅವಧಿಯಲ್ಲಿ ನಡೆದ ವರದಿಯನ್ನು ಭಾಜಿಸಿ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದವರಿಗೇ ಕೃತಜ್ಞತೆ ಸಲ್ಲಿಸಿದರು.

ನಿಕಟ ಪೂರ್ವ ಅಧ್ಯಕ್ಷ ಹರ್ಷರಾಜ್ ರನ್ನ ಸನ್ಮಾನಿಸಿ ಬೀಳ್ಕೊಡಲಾಯಿತು.2021ನೇ ನೂತನ ಅಧ್ಯಕ್ಷರಾಗಿ ಶೈಲಜಾ ರಾಜೇಶ್ ಅಧಿಕಾರವನ್ನು ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಸಮಾಜವನ್ನಾ ಜಾಗೃತಗೊಳಿಸುವ ಶಕ್ತಿ ಮಹಿಳೆಯರಲ್ಲಿದೆ ಮಹಿಳೆಯರು ಸಶಕ್ತರಾಗಬೇಕು ಆಗ ಸಶಕ್ತ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದರು. ನಿರ್ಗಮನ ಅಧ್ಯಕ್ಷ ಶ್ರೀನಿಧಿ ಭಟ್ ಅವರನ್ನ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪದ್ಮರಾಜ್ ಆರ್ ನೋಟರಿ ವಕೀಲರು ಮತ್ತು ಖಾಜಾಂಜಿ ಶ್ರೀ ಗೋಕರ್ಣನಾಥ ದೇವಸ್ಥಾನಕುದ್ರೋಳಿ, ಶ್ರೀ ಸತೀಶ್ ರಾವ್ ವಕೀಲರು ಬಿ.ಸಿ ರೋಡ್ ಉಪಸ್ಥಿತರಿದ್ದರು. ಗೌರವನ್ವಿತ ಅತಿಥಿಗಳಾಗಿ ಜೆಸಿಐ ಸೆನ್ ಸೌಜನ್ಯ ಹೆಗ್ಡೆ ಅಧ್ಯಕ್ಷರು ಝೋನ್ ಎಕ್ಸ್ ವಿ ಜೆಸಿಐ ಇಂಡಿಯಾ,ಅರ್ಜುನ್ ಭಂಡಾರ್ಕರ್ ಸ್ಥಾಪಕರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು, ವಿದ್ಯಾವತಿ ಪ್ರಮೋದ್ ಕುಮಾರ್ ಪಟ್ಟಣ ಪಂಚಾಯತ್ ಸದಸ್ಯರು ಬಂಟ್ವಾಳ ಉಪಸ್ಥಿತರಿದ್ದರು.

ಪದಗ್ರಹಣ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವು ನೆರವೇರಿತು.

- Advertisement -

Related news

error: Content is protected !!