Monday, April 29, 2024
spot_imgspot_img
spot_imgspot_img

ಜೆ.ಪಿ ಲಾ ಅಸೋಸಿಯೇಟ್ಸ್‌ನ ಪ್ರಥಮ ವರ್ಷದ ವಾರ್ಷಿಕೋತ್ಸವದ ಸಂಭ್ರಮಾಚರಣೆ ಕಾರ್ಯಕ್ರಮ

- Advertisement -G L Acharya panikkar
- Advertisement -

ಜೆ.ಪಿ ಲಾ ಅಸೋಸಿಯೇಟ್ಸ್ ನ ಪ್ರಥಮ ವರುಷದ ವಾರ್ಷಿಕೋತ್ಸವದ ಸಂಭ್ರಮಾಚರಣೆ ಕಾರ್ಯಕ್ರಮವು ಅಕ್ಟೋಬರ್ 14 ರಂದು ಮೊದಲ ಮಹಡಿ , ಗಿರಿಜಾ ಟವರ್, ಅರಮನೆ ಗುಟ್ಟಹಳ್ಳಿ, ಮುಖ್ಯ ರಸ್ತೆ, ಮಲ್ಲೇಶ್ವರಂ, ಬೆಂಗಳೂರುನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ನಾಡಿನ ಪ್ರಮುಖ ವ್ಯಕ್ತಿಗಳು ಆಗಮಿಸಿ ಸಂಸ್ಥೆಯ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಶುಭಾಶಯ ಕೋರಿದರು. ಈ ಕಾರ್ಯಕ್ರಮದ ಶುಭ ಸಂದರ್ಭದಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಇವರು ಜೆ. ಪಿ ಲಾ ಅಸೋಸಿಯೇಟ್ಸ್ ನ ಸ್ಥಾಪಕರಾದ ಜಯಪ್ರಕಾಶ್ ರೈ ಬೆಳ್ಳಾರೆ ಹಾಗೂ ಅವರ ಸಹದ್ಯೋಗಿಗಳನ್ನು ಅಭಿನಂದಿಸಿ ಸಂಸ್ಥೆಯು ಕಾನೂನು ಕ್ಷೇತ್ರದಲ್ಲಿ ಸಮಾಜಕ್ಕೆ ಸಲ್ಲಿಸುವ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇನ್ನಷ್ಟು ಸೇವೆ ಸಮಾಜಕ್ಕೆ ಸಂಸ್ಥೆಯಿಂದ ದೊರೆಯಲಿ ಎಂದು ತಮ್ಮ ಮನದಾಳದ ಮಾತನ್ನು ವ್ಯಕ್ತ ಪಡಿಸಿದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಕಾರ್ಯಕ್ರಮಕ್ಕೆ ಆಗಮಿಸಿ ಮೆಚ್ಚುಗೆ ವ್ಯಕ್ತ ಪಡಿಸಿ, ಸಮಾಜದ ದೀನ ದಲಿತರಿಗೆ, ನೊಂದ ಮಹಿಳೆಯರಿಗೆ ಹಾಗೂ ಸಮಾಜದ ನ್ಯಾಯ ವಂಚಿತ ವರ್ಗಗಳಿಗೆ ಈ ಸಂಸ್ಥೆಯು ನ್ಯಾಯ ಒದಗಿಸುವ ಕೆಲಸವನ್ನು ಮಾಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎಸ್ ಎನ್ ಮನ್ಮಥ ಮಾಜಿ ಅಧ್ಯಕ್ಷರು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ, ಉಪೇಂದ್ರ ಶೆಟ್ಟಿ, ಮಾಜಿ ಅಧ್ಯಕ್ಷರು, ಬಂಟರ ಸಂಘ ಬೆಂಗಳೂರು- ವ್ಯವಸ್ಥಾಪಕ ನಿರ್ದೇಶಕರು ಯುನಿವರ್ಸಲ್ ಇನ್ಸ್ಟಿಟ್ಯೂಷನ್ ಬೆಂಗಳೂರು, ಸುಭಾಷ್ ಕೌಡಿಚಾರು ಮಾಜಿ ಉಪಾಧ್ಯಕ್ಷರು ರಾಜ್ಯ ವಕೀಲರ ಪರಿಷತ್ ಬೆಂಗಳೂರು, ರವೀಂದ್ರನಾಥ ಕೇವಳ ಅಧ್ಯಕ್ಷರು ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು, ಡಾ.ಭರತ್ ಶೆಟ್ಟಿ ಸಂಸ್ಥಾಪಕ ಅಧ್ಯಕ್ಷರು ಭಾರತ ರಕ್ಷಣಾ ವೇದಿಕೆ, ರಾಘವೇಂದ್ರ ಶೆಟ್ಟಿ ಉದ್ಯಮಿ ಬೆಂಗಳೂರು, ಉಮೇಶ್ ಶೆಟ್ಟಿ ಉದ್ಯಮಿ ಬೆಂಗಳೂರು-ವ್ಯವಸ್ಥಾಪಕ ನಿರ್ದೇಶಕರು ದುರ್ಗಾಪರಮೇಶ್ವರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್, ಪ್ರವೀಣ್ ಕುಮಾರ್ ಮುಗುಳಿ ಅಧ್ಯಕ್ಷರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವಕೀಲರ ವೇದಿಕೆ, ಗಂಗಾಧರ ಶೆಟ್ಟಿ ವಿಶೇಷ ಅಭಿಯೋಜಕರು ಸಿಬಿಐ ಬೆಂಗಳೂರು, ಶೈಲಜಾ ರಮೇಶ್ ಕಾರ್ಯದರ್ಶಿಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವಕೀಲರ ವೇದಿಕೆ, ಲೋಕೇಶ್ ಪಿ ಸಿ ನ್ಯಾಯವಾದಿಗಳು ಬೆಂಗಳೂರು, ಮೋಹಿತ್ ಕುಮಾರ್ ಕೋಶಾಧಿಕಾರಿಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವಕೀಲರ ವೇದಿಕೆ, ಜಗದೀಶ್ ಡಿ.ಪಿ ಕೋಶಾಧಿಕಾರಿಗಳು ವಕೀಲರ ಸಂಘ ಸುಳ್ಯ, ಪ್ರಶಾಂತ್ ಆರ್ ಅಧ್ಯಕ್ಷರು ಪಿ.ಎಲ್‌.ಡಿ ಬ್ಯಾಂಕ್ ಕನಕಪುರ, ನವೀನ್ ಕುಮಾರ್ ಪದ್ಯಾಣ ಸಂಘಟನಾ ಕಾರ್ಯದರ್ಶಿ ಅವಿಭಜಿತ ದಕ್ಷಿಣ ಕನ್ನಡ ವಕೀಲರ ವೇದಿಕೆ ಬೆಂಗಳೂರು, ಡಾ. ಸಂಧ್ಯಾ ರೆಡ್ಡಿ ಲೇಖಕರು, ಶ್ರೀ ಶಂಕರ್ ರೆಡ್ಡಿ ನಿವೃತ ನಿರ್ದೇಶಕರು ತೋಟಗಾರಿಕೆ ಇಲಾಖೆ-ಉಪಾಧ್ಯಕ್ಷರು ಶ್ರೀನಿಧಿ ಸಹಕಾರಿ ಬ್ಯಾಂಕ್, ಬಾಬು ರೆಡ್ಡಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಶ್ರೀನಿಧಿ ಸಹಕಾರಿ ಬ್ಯಾಂಕ್, ಧರ್ಮಪಾಲ ಗೌಡ ಎಣ್ಣೆ ಮಜಲು ಹಿರಿಯ ನ್ಯಾಯವಾದಿ ಬೆಂಗಳೂರು, ನಾಗೇಶ್ ಕುಮಾರ್ ಕಲ್ಮುಟ್ಲು ಕಾರ್ಯದರ್ಶಿ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ, ಹರ್ಷಿತ್ ಕೊಡಪಾಲ ಉದ್ಯಮಿ ಬೆಂಗಳೂರು, ಅಶೋಕ್ ಕುಮಾರ್ ನ್ಯಾಯವಾದಿ ಸುಳ್ಯ, ಶ್ರೀನಾಥ್ ಬೆಳ್ಳಾರೆ ಹಣಕಾಸು ಸಲಹೆಗಾರರು ವೆ ಟು ವೆಲ್ತ್ ಬೆಂಗಳೂರು, ಸತೀಶ್ ನೆಲ್ಲಿಯಾಡಿ ಉದ್ಯಮಿ ಬೆಂಗಳೂರು, ಕುಶಾಲಪ್ಪ ಗೌಡ ಪೆರುವಾಜೆ ಮೊಕ್ತೆಸರರರು ಪೇರೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಹರಿಕೃಷ್ಣ ನ್ಯಾಯವಾದಿ ಬೆಂಗಳೂರು, ಅಂಜನ್ ಕುಮಾರ್ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಗಡಿನಾಡು ಘಟಕ ಆಂಧ್ರಪ್ರದೇಶ, ಕುಮಾರಿ ಜ್ಯೋತಿ ಗೌಡ ಸಮುದಾಯ ಆರೋಗ್ಯ ಅಧಿಕಾರಿ ಬಾಳಿಲ, ಶಶಿಕುಮಾರ್ ಬಿ ಎನ್ ಪಾಳ್ತಾಡಿ, ಕಿರಣ್ ಕುಮಾರ್ ನೆಲ್ಲಿಯಾಡಿ, ನಾರಾಯಣ ಹೆಗಡೆ ಬೆಳ್ಳಾರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜೆ.ಪಿ ಲಾ ಅಸೋಸಿಯೇಟ್ಸ್ ನ ನ್ಯಾಯವಾದಿಗಳಾದ ಜಯಪ್ರಕಾಶ್ ರೈ, ಅಶ್ವಿನಿ ಶೆಟ್ಟಿ, ತನುದೀಪ್ ಪೆಲ್ತಾಡ್ಕ, ಅಶೋಕ್ ಕುಮಾರ್, ಕಾರ್ತಿಕ್ ರೆಡ್ಡಿ, ವಿನಾಯಕ ಪುತ್ತೂರು, ಮಹೇಶ್ ಭಟ್, ದಿಶಾ, ಶಿವಕುಮಾರ್, ಬಾಲಸಾರಥಿ ಉಪಸ್ಥಿತರಿದ್ದರು. ನ್ಯಾಯವಾದಿಗಳಾದ ವಿನಾಯಕ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!