- Advertisement -
- Advertisement -
ಕಡಬ : ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಕಡಬದಲ್ಲಿ ನಡೆದಿದೆ.
ಕಡಬ ಗ್ರಾಮದ ಪಿಜಕ್ಕಳ ಪೊಯ್ಯೆತ್ತಡ್ಡ ನಿವಾಸಿ ಸುಂದರ ಗೌಡರವರ ಪುತ್ರ ರಾಜೇಶ್(30ವ.)
ಮೃತ ಯುವಕ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಇವರು ಅಲ್ಲಿಯೇ ಅನಾರೋಗ್ಯಕ್ಕೆ ಒಳಗಾಗಿದ್ದರು. ಮನೆಯವರು ಅಲ್ಲಿಂದ ಕರೆತಂದು ಆ.13ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದರು.
ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ಆ.14ರಂದು ಸಂಜೆ ನಿಧನರಾಗಿದ್ದಾರೆ. ಮೃತರು ತಂದೆ ಸುಂದರ ಗೌಡ, ಸಹೋದರ ಯಕ್ಷಗಾನ ಕಲಾವಿದ ಯೋಗೀಶ್ ಅವರನ್ನು ಅಗಲಿದ್ದಾರೆ.
- Advertisement -