Sunday, May 19, 2024
spot_imgspot_img
spot_imgspot_img

ಕಡಬ: ವೀಕೆಂಡ್ ಕರ್ಫ್ಯೂ ಇದ್ದರೂ ತೆರೆದ ಚಿಕನ್ ಸೆಂಟರ್; ತಹಶೀಲ್ದಾರರಿಂದ ದಾಳಿ; ಅಂಗಡಿಗೆ ಬೀಗ ಜಡಿದ ಅಧಿಕಾರಿಗಳು

- Advertisement -G L Acharya panikkar
- Advertisement -

ಕಡಬ: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಕಾರ್ಯಾಚರಣೆಗಿಳಿದ ಕಡಬ ತಹಸೀಲ್ದಾರ್ ಅನಂತ ಶಂಕರ ಬಿ ಯವರು ಕಡಬ, ಕೋಡಿಂಬಾಳ, ಮರ್ದಾಳ ಮುಂತಾದೆಡೆಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.

ಕಾರ್ಯಾಚರಣೆ ಸಂದರ್ಭದಲ್ಲಿ ಕೋಡಿಂಬಾಳ ಪೇಟೆಯಲ್ಲಿ 2 ಚಿಕನ್ ಸೆಂಟರ್ ಗಳು ತೆರೆದುಕೊಂಡು ವ್ಯಾಪಾರ ನಡೆಸುತ್ತಿರುವುದು ಪತ್ತೆಯಾಗಿದೆ. ಒಂದು ಅಂಗಡಿ ಮಾಲಕನಿಗೆ 2 ಸಾವಿರ ರೂ. ದಂಡ ವಿಧಿಸಿ ಅಂಗಡಿಗೆ ಬೀಗ ಜಡಿಯಲಾಯಿತು.

ಅಷ್ಟರಲ್ಲಿ ಇನ್ನೊಂದು ಅಂಗಡಿಯಾತ ಶಟರ್ ಎಳೆದು ಬೀಗ ಹಾಕದೆ ಪರಾರಿಯಾಗಿದ್ದ. ಆ ಅಂಗಡಿಗೆ ತಹಸೀಲ್ದಾರರ ಆದೇಶದಂತೆ ಬೀಗ ಜಡಿಯಲಾಗಿದೆ. ಕಾರ್ಯಾಚರಣೆ ವೇಳೆ ಕಡಬ ಕೋವಿಡ್ ನೋಡಲ್ ಆಫೀಸರ್ ಹರೀಶ್ ಬೆದ್ರಾಜೆ ಜೊತೆಗಿದ್ದರು

- Advertisement -

Related news

error: Content is protected !!