- Advertisement -
- Advertisement -
ಕಡಬ: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಕಾರ್ಯಾಚರಣೆಗಿಳಿದ ಕಡಬ ತಹಸೀಲ್ದಾರ್ ಅನಂತ ಶಂಕರ ಬಿ ಯವರು ಕಡಬ, ಕೋಡಿಂಬಾಳ, ಮರ್ದಾಳ ಮುಂತಾದೆಡೆಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.
ಕಾರ್ಯಾಚರಣೆ ಸಂದರ್ಭದಲ್ಲಿ ಕೋಡಿಂಬಾಳ ಪೇಟೆಯಲ್ಲಿ 2 ಚಿಕನ್ ಸೆಂಟರ್ ಗಳು ತೆರೆದುಕೊಂಡು ವ್ಯಾಪಾರ ನಡೆಸುತ್ತಿರುವುದು ಪತ್ತೆಯಾಗಿದೆ. ಒಂದು ಅಂಗಡಿ ಮಾಲಕನಿಗೆ 2 ಸಾವಿರ ರೂ. ದಂಡ ವಿಧಿಸಿ ಅಂಗಡಿಗೆ ಬೀಗ ಜಡಿಯಲಾಯಿತು.
ಅಷ್ಟರಲ್ಲಿ ಇನ್ನೊಂದು ಅಂಗಡಿಯಾತ ಶಟರ್ ಎಳೆದು ಬೀಗ ಹಾಕದೆ ಪರಾರಿಯಾಗಿದ್ದ. ಆ ಅಂಗಡಿಗೆ ತಹಸೀಲ್ದಾರರ ಆದೇಶದಂತೆ ಬೀಗ ಜಡಿಯಲಾಗಿದೆ. ಕಾರ್ಯಾಚರಣೆ ವೇಳೆ ಕಡಬ ಕೋವಿಡ್ ನೋಡಲ್ ಆಫೀಸರ್ ಹರೀಶ್ ಬೆದ್ರಾಜೆ ಜೊತೆಗಿದ್ದರು
- Advertisement -