- Advertisement -
- Advertisement -
ಕಡಬ: ಚಲಿಸುತ್ತಿದ್ದ ಸ್ಕೂಟರ್ ಮೇಲೆ ಕಡವೆ ಜಿಗಿದು ಸವಾರರಿಬ್ಬರು ಗಾಯ ಗೊಂಡ ಘಟನೆ ಕಡಬ ತಾಲೂಕು ಪಂಜ ಸಮೀಪದ ಬಳ್ಪದಲ್ಲಿ ನಡೆದಿದೆ.
ಐವತ್ತೊಕ್ಲು ಗ್ರಾಮದ ನೇರಳ ಸುದರ್ಶನ ಮತ್ತು ಅವರ ಪತ್ನಿ ಅಕ್ಷತಾ ರವರು ಸುಬ್ರಹ್ಮಣ್ಯದಿಂದ ಪಂಜದ ಕಡೆ ಬರುತ್ತಿದ್ದಾಗ ಬಳ್ಪ ಸಮೀಪದ ಎಡೋಣಿ ಎಂಬಲ್ಲಿ ಸ್ಕೂಟರ್ ಮೇಲೆ ಕಡವೆ ಜಿಗಿದ್ದಿದ್ದು ಸವಾರರಿಬ್ಬರು ಗಾಯ ಗೊಂಡಿದ್ದಾರೆ.
ಅಕ್ಷತಾ ರವರ ತಲೆಗೆ ಗಾಯವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದರ್ಶನ್ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆದಿದ್ದಾರೆ. ಪಂಜ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.
- Advertisement -