Friday, May 3, 2024
spot_imgspot_img
spot_imgspot_img

ಮೈದುನನ ಜೊತೆ ಅತ್ತಿಗೆಯ ಅನೈತಿಕ ಸಂಬಂಧ; ಕೊಲೆಯಲ್ಲಿ ಅಂತ್ಯ

- Advertisement -G L Acharya panikkar
- Advertisement -

ಮೈದುನನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಶವ ಹೊಲದಲ್ಲಿ ಘಟನೆ ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಧಾರವಾಡ ನಗರದ ಕಿಲ್ಲಾ ಪ್ರದೇಶದ ರೂಪಾ ಸವದತ್ತಿ (45) ಎನ್ನಲಾಗಿದೆ. ರಾಕೇಶ ಅತ್ತಿಗೆಯನ್ನೇ ಬರ್ಬರವಾಗಿ ಕೊಲೆ ಮಾಡಿದ ಆರೋಪಿ.

ಧಾರವಾಡ ತಾಲೂಕಿನ ಗೋವನಕೊಪ್ಪ ರಸ್ತೆಯ ಪಕ್ಕದಲ್ಲಿನ ಹೊಲದಲ್ಲಿ ಮಹಿಳೆಯ ಶವ ಒಂದು ಪತ್ತೆಯಾಗಿರೋದಾಗಿ ಧಾರವಾಡ ಗ್ರಾಮೀಣ ಠಾಣೆ ಪೊಲೀಸರಿಗೆ ಕರೆಯೊಂದು ಬಂದಿತ್ತು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರಿಗೆ ಇದು ಕೊಲೆ ಎಂದು ಗೊತ್ತಾಗಿತ್ತು.

ರೂಪಾಗೆ, ನಿತ್ಯವೂ ಗಾಂಧಿ ವೃತ್ತದ ಬಳಿಯ ದರ್ಗಾಕ್ಕೆ ಹೋಗೋ ರೂಢಿ ಇತ್ತು. ಇದೇ ರೀತಿ ಅವತ್ತು ದರ್ಗಾಕ್ಕೆ ಹೋಗಿ, ಅಲ್ಲಿಂದ ಹೊರ ಬಂದಿದ್ದ ಆಕೆ ಕಾಣೆಯಾಗಿದ್ದಳು. ಈ ಬಗ್ಗೆ ಉಪನಗರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಆದರೆ, ಹಾಗೆ ನಾಪತ್ತೆಯಾದ ಮರುದಿನ ಹೊಲವೊಂದರಲ್ಲಿ ರೂಪಾಳ ಶವ ಪತ್ತೆಯಾಗಿತ್ತು.

ಸಂಬಂಧದಲ್ಲಿ ರೂಪಾ ರಾಕೇಶನಿಗೆ ಅತ್ತಿಗೆ ಆಗಬೇಕು. ಇಬ್ಬರ ವಯಸ್ಸಿನಲ್ಲಿ ಹತ್ತು ವರ್ಷಗಳ ಅಂತರವಿದೆ. ರಾಕೇಶನ ಮತ್ತು ರೂಪಾ ಐದಾರು ವರ್ಷಗಳಿದ್ದ ಪ್ರೀತಿಸುತ್ತಿದ್ದರು.ಜೂನ್ 8 ರಂದುದರ್ಗಾಕ್ಕೆ ಹೋಗಿ ಹೊರಗೆ ಬಂದ ರೂಪಾ ರಾಕೇಶ್​ಗೆ ಫೋನ್ ಮಾಡಿದ್ದಾಳೆ. ಆಕೆಯನ್ನು ಕರೆದುಕೊಂಡು ಗೋವನಕೊಪ್ಪ ಗ್ರಾಮದ ರಸ್ತೆ ಕಡೆ ಬೈಕ್​ನಲ್ಲಿ ಹೋದ ರಾಕೇಶ, ರಸ್ತೆ ಪಕ್ಕದ ಹೊಲದೊಳಗೆ ಆಕೆಯನ್ನು ಕರೆದೊಯ್ದಿದ್ದಾನೆ.

ಈ ವೇಳೆ ಫೋನ್ ವಿಚಾರವಾಗಿ ರೂಪಾ ಜಗಳಕ್ಕೆ ಇಳಿದಿದ್ದಾಳೆ. ಆಕೆಯ ರಂಪಾಟ, ಕಿರಿಕಿರಿಯಿಂದ ಬೇಸತ್ತು ಹೋಗಿದ್ದ ರಾಕೇಶ ಒಮ್ಮೆಲ್ಲೇ ಜೋರಾಗಿ ಆಕೆಗೆ ಹೊಡೆದಿದ್ದು, ಆಕೆ ಕುಸಿದು ಬಿದ್ದಿದ್ದಾಳೆ. ಕೂಡಲೇ ಅಲ್ಲಿಯೇ ಇದ್ದ ಕಲ್ಲಿನಿಂದ ಜೋರಾಗಿ ತಲೆ, ಮುಖಕ್ಕೆ ಚಚ್ಚಿದ್ದಾನೆ. ನಂತರ ಆರೋಪಿ ಸ್ಥಳದಿಂದ ತೆರಳಿ ನೇರವಾಗಿ ಮನೆಗೆ ಬಂದು ಏನೂ ನಡೆದೇ ಇಲ್ಲ, ಎನ್ನುವಂತೆ ಇದ್ದನು. ನಂತರ ತಾನೇ ರೂಪಾಳ ಪತಿ ಲಕ್ಷ್ಮಣನನ್ನು ಕರೆದೊಯ್ದು ಉಪನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದ.

ಅಲ್ಲದೇ ಹುಡುಕಾಟದ ನಾಟಕವಾಡಿ, ರೂಪಾಳನ್ನು ಕೊಲೆ ಮಾಡಿದ್ದ ರಸ್ತೆಗೆ ಯಾರಿಗೂ ಗೊತ್ತಾಗದಂತೆ ಕರೆದೊಯ್ದಿದ್ದಾನೆ. ರಾಕೇಶನ ವರ್ತನೆ ಬಗ್ಗೆ ಅನುಮಾನ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಕರೆಯಿಸಿ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಗೆ ಬಂದಿದೆ. ಇದೀಗ ರಾಕೇಶನನ್ನು ಬಂಧಿಸಿರೋ ಪೊಲೀಸರು, ಜೈಲಿಗೆ ಅಟ್ಟಿದ್ದಾರೆ.

- Advertisement -

Related news

error: Content is protected !!