ಮಂಗಳೂರಿನ ಮಂಗಳಾದೇವಿಯ ಶಾಂತ ದುರ್ಗಾ ಸ್ವಸಹಾಯ ಸಂಘದ ವತಿಯಿಂದ ಬೃಹತ್ ಸಸ್ಯ ಮೇಳ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಗಳನ್ನೂಳಗೊಂಡ “ಕದ್ರಿ ಪಾರ್ಕ್ ಡ್ ಪರ್ಬದ ಮೇಳ” ಸಂಭ್ರಮವು ನ.3ರಿಂದ ನ. 5ರವರೆಗೆ ಪ್ರತಿ ದಿನ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ರ ವರೆಗೆ ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ನಡೆಯಲಿದೆ.
ನ.3ರ ಶುಕ್ರವಾರ ಸಂಜೆ 5 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವೇದವ್ಯಾಸ್ ಕಾಮತ್ ಶಾಸಕರು ಮಂಗಳೂರು ದಕ್ಷಿಣ ಕ್ಷೇತ್ರ, ಹಾಗೂ ಮುಖ್ಯ ಅತಿಥಿಗಳಾಗಿ ಶಕೀಲಾ ಕಾವ ಸದಸ್ಯರು, ಮಂಗಳೂರು ಮಹಾ ನಗರ ಪಾಲಿಕೆ, ಹೆಚ್ ಆರ್ ನಾಯ್ಕ್ ಉಪನಿರ್ದೇಶಕರು, ತೋಟಗಾರಿಕ ಇಲಾಖೆ ಮಂಗಳೂರು, ಗೀತಾ ಕುಲಕರ್ಣಿ ACP ಟ್ರಾಫಿಕ್ ಪೊಲೀಸ್ ಮಂಗಳೂರು, ವಿಶಾಲ್ ಎಲ್ ಸಾಲಿಯಾನ್, ಅಧ್ಯಕ್ಷರು ದ ಕ ಜಿಲ್ಲಾ ಸಣ್ಣ ಕೈಗಾರಿಕ ಅಶೋಸಿಯೇಷನ್ ಮಂಗಳೂರು ಇವರು ಭಾಗವಹಿಸಿಸಲಿದ್ದಾರೆ.
ಬಳಿಕ ಕರಾವಳಿಯ ಖ್ಯಾತ ನಿರೂಪಕ ವಿಜೆ ಮಧುರಾಜ್ ಇವರ ನಿರೂಪಣೆಯಲ್ಲಿ ಕರಾವಳಿಯ ಖ್ಯಾತ ಗಾಯಕ ಪ್ರಕಾಶ್ ಮಹಾದೇವನ್ ಹಾಗೂ ರೂಪ ಪ್ರಕಾಶ್ ಬಳಗದವರಿಂದ ‘ಸಂಗೀತ ರಸ ಸಂಜೆ’ ಕಾರ್ಯಕ್ರಮ ನಡೆಯಲಿದೆ.
ನ.4ರಂದು ಮಧ್ಯಾಹ್ನ 2 ಗಂಟೆಯಿಂದ ‘ಕರೋಕೆ ಗಾಯನ ಸ್ಪರ್ಧೆ’ ನಡೆಯಲಿದೆ.
ನ. 5 ರಂದು ಸಂಜೆ 5 ಗಂಟೆಗೆ ಕಲಾ ತಪಸ್ವಿ ಸಾಂಸ್ಕೃತಿಕ ತಂಡ ಧರ್ಮನಗರ ವಿಟ್ಲ ಇವರಿಂದ ಅಮೋಘ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಹಣ್ಣಿನ , ಹೂವಿನ ಮತ್ತು ವಿವಿಧ ತಳಿಯ ಸಸ್ಯಗಳನ್ನೊಳಗೊಂಡ ಸಸ್ಯ ಮೇಳವು ಮೇಳದ ಸೊಬಗನ್ನು ಹೆಚ್ಚಿಸಲಿದೆ.
ಪ್ರತಿದಿನ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ವಿವಿಧ ಬಗೆಯ ಸ್ಟಾಲ್ ಗಳು,ಬಟ್ಟೆ , ಲೇಡೀಸ್ ಐಟಮ್ಸ್ , ಪಿಂಗಾಣಿ ವಸ್ತುಗಳು , ಫ್ಯಾನ್ಸಿ , ಚಪ್ಪಲಿ , ಮ್ಯಾಜಿಕ್ ಬುಕ್ಸ್ , ಹ್ಯಾಂಡ್ ಲೂಮ್ ಟಾಪ್ಸ್ , ವಾಚ್ , ತರಕಾರಿ ಬೀಜಗಳು , ಆರ್ಟಿಫಿಷಿಯಲ್ ಫ್ಲವರ್ಸ್ , ತಂಪು ಕನ್ನಡಕ , ಬುಕ್ಸ್ ನ ಸ್ಟೇಷನರಿ , ಆಗ್ರೋ ಪ್ರಾಡಕ್ಟ್ಸ್ , ಡ್ರೈ ಫ್ರುಟ್ಸ್ ನ ಚಾಕೊಲೇಟ್ಸ್ , 20 ರೂಪಾಯಿ ಐಟೆಮ್ಸ್ , ಸ್ಟೀಲ್ ಪಾತ್ರೆಗಳು , ಮಸಾಜ್ ಇಕ್ಯೂಪ್ಮೆಂಟ್ಸ್ , ಇನ್ನೂ ಅನೇಕ ವಿವಿಧ ಬಗೆಯ ಮಳಿಗೆ ಗಳು ಮೇಳದಲ್ಲಿರುತ್ತದೆ.
ಇನ್ನೂ ವಿವಿಧ ಬಗೆಯ ತಿಂಡಿಗಳು ಚರುಮುರಿ , ಗೊಳಿಸೋಡ , ಐಸ್ಕ್ರೀಂ , ಕಲ್ಪರಸ , ಜೀನಿ ಐಟೆಮ್ಸ್ , ಮಶ್ರೂಮ್ , ಹೋಳಿಗೆ ಹಾಗೂ ಇನ್ನಿತರ ತಿಂಡಿ ತಿನಿಸುಗಳು ಲಭ್ಯವಿರುತ್ತದೆ . ಮಕ್ಕಳಿಗೆ ಆಟವಾಡುವ ಬೌನ್ಸಿ , ಹೆಲಿಕಾಫ್ಟರ್, ಸೇರಿದಂತೆ ಅನೇಕ ಆಟಿಕೆಗಳು ಮೇಳದ ಮೆರುಗನ್ನು ಹೆಚ್ಚಿಸಲಿದೆ.