ಕಲ್ಲಡ್ಕ: ಅಪ್ರಾಪ್ತ ಬಾಲಕನನ್ನು ಪುಸಲಾಯಿಸಿ ಸಲಿಂಗಕಾಮಕ್ಕಾಗಿ ಕರೆದೊಯ್ಯಲು ಯತ್ನಿಸಿ ಸಾರ್ವಜನಿಕರ ಕೈಯಲ್ಲಿ ಗೂಸಾ ತಿಂದ ಘಟನೆ ನಡೆದಿದೆ. ಕಾಮುಕನನ್ನು ಸಾರ್ವಜನಿಕರು ಬಂಟ್ವಾಳ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಸ್ಸಿನಲ್ಲಿ ಪರಿಚಯವಾದ ಬಾಲಕನಿಗೆ ರಮೇಶ ಎಂದು ಹೆಸರು ಹೇಳಿಕೊಂಡು ಮೊಬೈಲ್ ನಂಬರ್ ತೆಗೆದುಕೊಂಡಿದ್ದ. ನಂತರದ ದಿನಗಳಲ್ಲಿ ಬಾಲಕನಿಗೆ ಅಶ್ಲೀಲವಾಗಿ ಸಂದೇಶ ರವಾನಿಸುತ್ತಿದ್ದ. ಈ ವಿಷಯ ಬಾಲಕನ ಪೋಷಕರಿಗೂ ತಿಳಿದ ನಂತರ ಸಂಘಟನೆಯವರು ರಮೇಶನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕರ ಕೈಯಲ್ಲಿ ತಗಲಾಕ್ಕೊಂಡ ಅಬ್ದುಲ್ ರಹಿಮಾನ್..!
ಬಾಲಕನನ್ನು ಪುಸಲಾಯಿಸಿ ಸಲಿಂಗಕಾಮಕ್ಕೆ ಬಳಸಿಕೊಳ್ಳಲು ಯತ್ನಿಸಿದ ಕಾಮುಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಈ ವೇಳೆ ಆತನ ಅಸಲಿಯತ್ತು ಬಯಲಾಗಿದೆ. ಉಜಿರೆ ಮೂಲದ ಟೆಂಪೋ ಚಾಲಕನಾಗಿರುವ ಈತ ರಮೇಶ ಎಂದು ಸುಳ್ಳು ಹೇಳಿಕೊಂಡಿದ್ದ. ಅಬ್ದುಲ್ ರಹಿಮಾನ್ ಈತನ ನಿಜವಾದ ಹೆಸರು. ಈತನನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ.