Friday, April 26, 2024
spot_imgspot_img
spot_imgspot_img

ಕಣ್ಣೂರಿನಲ್ಲಿ ಯೂತ್ ಲೀಗ್ ಕಾರ್ಯಕರ್ತನ ಕೊಲೆ!

- Advertisement -G L Acharya panikkar
- Advertisement -

ಕಾಸರಗೋಡು: ಚುನಾವಣೆ ಮುಗಿದ ಬಳಿಕ ಕಣ್ಣೂರಿನಲ್ಲಿ ನಡೆದ ಘರ್ಷಣೆಯಲ್ಲಿ ಯೂತ್ ಲೀಗ್ ಕಾರ್ಯಕರ್ತನೋರ್ವ ಕೊಲೆಗೀಡಾದ ಘಟನೆ ನಡೆದಿದೆ.

ಕೊಲೆಗೀಡಾದವನನ್ನು ಕೂತು ಪರಂಬ ಪುಳ್ಳಕರೆಯ ಮನ್ಸೂರ್ ( 22) ಎಂದು ಗುರುತಿಸಲಾಗಿದೆ. ಸಹೋದರ ಮುಹಸಿನ್ (27) ಗಂಭೀರ ಗಾಯಗೊಂಡಿದ್ದಾನೆ.

ಮೃತ ಮನ್ಸೂರ್ ಏ.6 ರ ಮಂಗಳವಾರ ರಾತ್ರಿ 8:30 ರ ಸುಮಾರಿಗೆ ಮನೆಗೆ ನುಗ್ಗಿದ ತಂಡವೊಂದು ಮನೆಗೆ ಕಚ್ಚಾ ಬಾಂಬ್ ಎಸೆದಿದ್ದು , ಬಳಿಕ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಮನ್ಸೂರ್ ಹಾಗೂ ಮುಹಸಿನ್’ ರನ್ನು ಕೋಝಿಕ್ಕೋಡ್ ನ ಆಸ್ಪತ್ರೆಗೆ ದಾಖಲಿಸಿದರೂ ಬುಧವಾರ ಮುಂಜಾನೆ ಮನ್ಸೂರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಕೃತ್ಯಕ್ಕೆ ಸಂಬಂಧಪಟ್ಟಂತೆ ಓರ್ವ ಸಿ ಪಿ ಎಂ ಕಾರ್ಯಕರ್ತನನ್ನು ಕೂತು ಪರಂಬ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

- Advertisement -

Related news

error: Content is protected !!