- Advertisement -
- Advertisement -
ವಿಟ್ಲ: ಶ್ರೀ ಮಲರಾಯಿ ಭಜನಾ ಮಂಡಳಿ(ರಿ.) ಹಾಗೂ ಮಹಿಳಾ ಭಜನಾ ಮಂಡಳಿ ಕಾಪುಮಜಲು ಕೊಡಂಗಾಯಿ ಇಲ್ಲಿ ಕೋಟಿ ಶ್ರೀರಾಮ ಮಂತ್ರ ಪಠಣ ಸಮಾಪ್ತಿ ಕಾರ್ಯಕ್ರಮ ಮತ್ತು ಶ್ರೀ ರಾಮ ಕಲ್ಪೋಕ್ತ ಪೂಜೆಯು ಜ.12 ರಂದು ಸಂಜೆ ಗಂಟೆ 5 ಕ್ಕೆ ನಡೆಯಲಿದೆ.
ಬಳಿಕ ನಡೆಯುವ ಸಭಾಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಧಾರ್ಮಿಕ ಮುಂದಾಳು ಕಶ್ಯಕೋಡಿ ಸೂರ್ಯನಾರಾಯಣ ಭಟ್ ಇವರು ಧಾರ್ಮಿಕ ಭಾಷಣ ಮಾಡಲಿದ್ದಾರೆ. ಶ್ರೀರಾಮ್ ಭಟ್ ಮತ್ತು ಶ್ರೀರಾಮ್ ಗಣೇಶ್ ಮಂಗಳೂರು ಇವರು ಪ್ರವಚನ ನೀಡಲಿದ್ದಾರೆ. ಕಾಪುಮಜಲು ಶ್ರೀಮಲರಾಯಿ ಭಜನಾ ಮಂಡಳಿ ಅಧ್ಯಕ್ಷರಾದ ಅರವಿಂದ ರೈ ಮೂರ್ಜೆಬೆಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಾಪುಮಜಲು ಶ್ರೀ ಮಲರಾಯಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಭುಜಂಗ ರೈ ಪಡಾರುಗುತ್ತು, ಪಂಜಿಗದ್ದೆ ಪಂಚಮಿ ಗ್ರೂಪ್ಸ್ ನ ಸತೀಶ್ ಭಟ್ ಪಂಜಿಗದ್ದೆ, ಬಂಟ್ವಾಳ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ ಪದ್ಮಶ್ರೀ ಸತ್ತಿಕಲ್ಲು ಭಾಗವಹಿಸಲಿದ್ದಾರೆ.
- Advertisement -