- Advertisement -
- Advertisement -
ಕಾರ್ಕಳ : ಹೊಟೇಲ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿಯುಂಟಾದ ಘಟನೆ ಕಾರ್ಕಳ ಕಸಬಾ ಗ್ರಾಮದ ಕರಿಯಕಲ್ಲಿನಲ್ಲಿ ಸಂಭವಿಸಿದೆ.
ಕರಿಯಕಲ್ಲು ಜಂಕ್ಷನ್ ಬಳಿಯಿರುವ ನಿರ್ಮಲ ರಾವ್ ಮಾಲೀಕತ್ವದ ಹೋಟೆಲ್ ಕಟ್ಟಡಕ್ಕೆ ಆದಿತ್ಯವಾರ ಮುಂಜಾನೆ 4 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಪರಿಣಾಮವಾಗಿ ಫ್ರಿಡ್ಜ್ ಗ್ರೇಂಡರ್, ಮಿಕ್ಸಿ, ಅಡುಗೆ ಪಾತ್ರೆ, ದಿನಸಿ ಸಾಮಾಗ್ರಿ, ವಿದ್ಯುತ್ ಸಂಪರ್ಕ ಬೆಂಕಿಗೆ ಆಹುತಿಯಾಗಿದೆ.
ಕಟ್ಟಡದ ಮೇಲ್ಬಾವಣಿ ಭಾಗಶಃ ಸುಟ್ಟು ಹೋಗಿದ್ದು ಸ್ಥಳೀಯರ ಹಾಗೂ ಅಗ್ನಿಶಾಮಕ ದಳದವರ ಸಹಕಾರದಿಂದ ಬೆಂಕಿಯನ್ನು ನಂದಿಸಲಾಯಿತು. ಅಂದಾಜು 1,20,000 ರೂ. ಯಷ್ಟು ಹಾನಿಯುಂಟಾಗಿರುತ್ತದೆ.
- Advertisement -