- Advertisement -
- Advertisement -
ಕಾರ್ಕಳ: ಕಾರ್ಕಳ ಸಮೀಪದ ಕಲ್ಯ ಕುಂಟಾಡಿ ಅಶೋಕ ನಗರ ಎಂಬಲ್ಲಿ ಹಸಿವೆಯಿಂದ ಬಳಲಿದ ವೃದ್ಧ ತಾಯಿ ಊಟ ಕೇಳಿದ್ದರೆಂಬ ಕಾರಣಕ್ಕಾಗಿ ತೆಂಗಿನ ಮರದ ಹೆಡೆಯಿಂದ ತಲೆಗೆ ಹೊಡೆದ ಘಟನೆ ನಡೆದಿದೆ.
ದಾಮೋದರ ಆಚಾರ್ಯ ಪ್ರಕರಣದ ಆರೋಪಿತ ವ್ಯಕ್ತಿಯಾಗಿದ್ದು, ಈತನ ತಾಯಿ ಯಶೋದಾ(83) ಘಟನೆಯಲ್ಲಿ ತೀವ್ರ ಗಾಯಗೊಂಡು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇತ್ತೀಚೆಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ವಯೋ ಸಹಜವೆಂಬಂತೆ ದುಡಿಯಲು ಅಶಕ್ತರಾಗಿದುದ್ದರಿಂದ ಇವರ ಮಗ ದಾಮೋದರ ಆಚಾರ್ಯ ಕೋಪಗೊಂಡು, ಬೈಯುತ್ತಿರುವುದು ಆತನ ದಿನಚರಿಯಾಗಿತ್ತು. ಹಸಿವೆಯಾಗುತ್ತಿದೆ ಎಂದು ಹೇಳಿದ ವಯೋವೃದ್ಧೆ ಯಶೋದಾ ತನಗೆ ಊಟ ನೀಡುವಂತೆ ದಾಮೋದರ ಆಚಾರ್ಯನಲ್ಲಿ ತಿಳಿಸಿದ್ದು, ಇದರಿಂದ ಕೋಪಗೊಂಡು ನಿನಗೆ ಊಟ ಹಾಕುವುದಿಲ್ಲ ಎಂದು ಬೈದು ತೆಂಗಿನ ಮರದ ಹೆಡೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾರೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -