- Advertisement -
- Advertisement -




ಕಾಸರಗೋಡು: ಹಾವು ಕಡಿದು ಮಂಜೇಶ್ವರ ನಿವಾಸಿಯೋರ್ವರು ಮೃತಪಟ್ಟ ಘಟನೆ ಮೀಯಪದವು ಎಂಬಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಮೀಯಪದವು ಪಳ್ಳತ್ತಡ್ಕದ ಅಶೋಕ್ (43) ಎಂದು ಗುರುತಿಸಲಾಗಿದೆ.
ಗಾರೆಕೆಲಸ ಮಾಡುತ್ತಿದ್ದಾತ ರಾತ್ರಿ ವೇಳೆ ಮನೆಯ ಸಿಟೌಟ್ ನಲ್ಲಿದ್ದಂತಹ ಸಮಯದಲ್ಲಿ ಹಾವು ಕಡಿದಿದ್ದು, ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಮೃತರು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
- Advertisement -








