- Advertisement -
- Advertisement -
ಕಾಸರಗೋಡು: ಜ್ವರದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ನಡೆದಿದೆ.
ಚೆಮ್ಮನಾಡಿನ ಕಾಸರಕೋಟ್ನ ಅಲಕಂಪಾಡಿಕಲ್ನ ಶ್ರೀಜಿತ್ ಅವರ ಪತ್ನಿ ಟಿಟಿಸಿ ವಿದ್ಯಾರ್ಥಿಯಾಗಿದ್ದಅಶ್ವತಿ (28) ಮೃತಪಟ್ಟ ಮಹಿಳೆ.
ಅಶ್ವತಿ ಅವರಿಗೆ ಕಳೆದ ಸೋಮವಾರ ಜ್ವರ ಕಾಣಿಸಿಕೊಂಡಿದ್ದು ಕಾಸರಗೋಡಿನ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ತೆರಳಿದ್ದರು. ಜ್ವರ ಕಡಿಮೆಯಾಗದ ಹಿನ್ನಲೆ ಮಂಗಳವಾರ ಮತ್ತೆ ಆಸ್ಪತ್ರೆಗೆ ಬಂದಿದ್ದು, ಅವರ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಅಶ್ವತಿ ಹಾಗೂ ಶ್ರೀಜಿತ್ ದಂಪತಿಗೆ ಆರು ವರ್ಷದ ಮಗನಿದ್ದಾನೆ. ಮೃತದೇಹವನ್ನು ಮಂಗಳೂರು ಆಸ್ಪತ್ರೆಯಲ್ಲಿರಿಸಲಾಗಿದೆ.
- Advertisement -