Sunday, January 26, 2025
spot_imgspot_img
spot_imgspot_img

ಕಾಸರಗೋಡು: ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಪ್ರಕರಣ; 14 ಆರೋಪಿಗಳು ದೋಷಿಗಳೆಂದು ತೀರ್ಪು ಪ್ರಕಟ

- Advertisement -
- Advertisement -

ಕಾಸರಗೋಡು: ಯುವ ಕಾಂಗ್ರೆಸ್ ಕಾರ್ಯಕರ್ತರಾದ ಪೆರಿಯ ಕಳ್ಳಿಯೊಟ್‌ ಶರತ್ ಲಾಲ್(19) ಮತ್ತು ಕೃಪೇಶ್ (20) ಹತ್ಯೆ ಪ್ರಕರಣದಲ್ಲಿ 14 ಆರೋಪಿಗಳನ್ನು ಎರ್ನಾಕುಲಂ ಸಿಬಿಐ ಕೋರ್ಟ್ ದೋಷಿಗಳೆಂದು ತೀರ್ಪು ನೀಡಿದೆ.

ಮಾಜಿ ಶಾಸಕ ಕೆ.ವಿ.ಕುಂಞೆರಾಮನ್ ಸೇರಿದಂತೆ 14 ಆರೋಪಿಗಳು. ನ್ಯಾಯಾಲಯ 10 ಮಂದಿಯನ್ನು ಖುಲಾಸೆಗೊಳಿಸಿದೆ. 1ರಿಂದ 10 ಆರೋಪಿಗಳ ಮೇಲೆ ಕೊಲೆ ಆರೋಪವಿದ್ದು, ಶಿಕ್ಷೆಗೊಳಗಾದ 14 ಮಂದಿಯಲ್ಲಿ ಹತ್ತು ಮಂದಿ ಪ್ರಮುಖ ಸಿಪಿಎಂ ನಾಯಕರು.

ಎ ಪೀತಾಂಬರನ್, ಸಿಪಿಎಂ ಪೆರಿಯ ಸ್ಥಳೀಯ ಸಮಿತಿಯ ಮಾಜಿ ಸದಸ್ಯ, ಸಾಜಿ ಸಿ. ಜಾರ್ಜ್, ಕೆ.ಎಂ. ಸುರೇಶ್, ಕೆ. ಅನಿಲ್ ಕುಮಾ‌ರ್, ಜಿಜಿನ್, ಆರ್. ಶ್ರೀರಾಗ್, ಎ. ಅಶ್ವಿನ್ ಮತ್ತು ಸುಬಿಶ್ ಕೊಲೆ ಆರೋಪಿಗಳು. ಒಂಬತ್ತನೇ ಪ್ರತಿವಾದಿ ಎ ಮುರಳಿ, ಟಿ ರಂಜಿತ್. ಕೆ. ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, ಎ. ಸುರೇಂದ್ರನ್, ಉದುಮ ಮಾಜಿ ಶಾಸಕ ಕೆ.ವಿ. ಕುಂಣಿರಾಮನ್, ರಾಘವನ್ ವೆಲ್ಲೋಳಿ ಮತ್ತು ಕೆ.ವಿ.ಭಾಸ್ಕರನ್ ಅವರನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಫೆಬ್ರವರಿ 17, 2019 ರಂದು ಕೊಲೆ ನಡೆದಿದ್ದು, ನ್ಯಾಯಾಲಯ 292 ಸಾಕ್ಷಿಗಳ ವಿಚಾರಣೆ ನಡೆಸಿತ್ತು. ಮೊದಲಿಗೆ ಸ್ಥಳೀಯ ಪೊಲೀಸರ ವಿಶೇಷ ತಂಡ ಹಾಗೂ ನಂತರ ಅಪರಾಧ ವಿಭಾಗದ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು.

ಶರತ್ ಲಾಲ್ ಮತ್ತು ಕೃಪೇಶ್ ಅವರ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ತಿರುವನಂತಪುರ ಘಟಕದ ಡಿವೈಎಸ್ಪಿ ಅನಂತಕೃಷ್ಣನ್ ನೇತೃತ್ವದ ಸಿಬಿಐ ತಂಡ ತನಿಖೆ ನಡೆಸಿತ್ತು. ಫೆಬ್ರವರಿ 2023 ರಲ್ಲಿ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡಿತ್ತು.

- Advertisement -

Related news

error: Content is protected !!