- Advertisement -
- Advertisement -
ವಿಟ್ಲ: ವಿಟ್ಲ ಕಡಂಬು ಬಾಳಿಕೆ ಧರ್ಮಚಾವಡಿಯ ರಕ್ತೇಶ್ವರಿ, ಉಳ್ಳಾಲ್ತಿ, ಮಲರಾಯಿ ಸಾಸ್ತಾರ, ನಾಗದೇವರು, ಗುಳಿಗ, ಕೊರತಿ, ಸಪರಿವಾರ ದೈವಗಳಿಗೆ ಕುಂಟುಕುಡೇಲು ಗುರುರಾಜ ತಂತ್ರಿಯವರ ಪೌರೋಹಿತ್ಯದಿಂದ,
ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರ ಆಶೀರ್ವಾದದೊಂದಿಗೆ ಇರಾಬಾಳಿಕೆ ಸತೀಶ್ ಕುಮಾರ್ ಆಳ್ವರವರ ನೇತೃತ್ವದಲ್ಲಿ ಫೆ.5 ರಿಂದ 6 ರವರೆಗೆ ಕಡಂಬು ಬಾಳಿಕೆ ಧರ್ಮ ಚಾವಡಿಯಲ್ಲಿ ಕುಂಟುಕುಡೇಲು ಶ್ರೀ ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ದೈವಗಳ ಕೆಂಡಸೇವೆ, ನೃತ್ತಸೇವೆ, ಕೋಲ ನಡೆಯಿತು.ನಿನ್ನೆ ಬೆಳಿಗ್ಗೆ ಗಣಪತಿ ಹವನ ನಡೆಯಿತು. ದೈವಗಳ ತಂಬಿಲ ಸೇವೆ ನಡೆದು, ಪ್ರಸಾದ ವಿತರಣೆ ನಡೆಯಿತು.
ರಾತ್ರಿ ಪ್ರಸಾದ ಭೋಜನದ ಬಳಿಕ ಕೊರತಿ ದೈವದ ನೃತ್ತ ನಡೆದ ನಂತರ ರಕ್ತೇಶ್ವರಿ ದೈವದ ನೃತ್ತ ಮತ್ತು ಕೆಂಡ ಸೇವೆ ನೆರವೇರಿತು.
- Advertisement -