Friday, April 19, 2024
spot_imgspot_img
spot_imgspot_img

ಫೇಸ್ ಬುಕ್ ಪೋಸ್ಟ್ ಬಗ್ಗೆ ತಪ್ಪೊಪ್ಪಿಕೊಂಡ ನವೀನ್

- Advertisement -G L Acharya panikkar
- Advertisement -

ಬೆಂಗಳೂರು: ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಅರೆಸ್ಟ್ ಆಗಿರುವ ಆರೋಪಿ ನವೀನ್ ಫೇಸ್ ಬುಕ್ ಪೋಸ್ಟ್ ಹಾಕಿದ್ದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಪೂರ್ವ ವಿಭಾಗದ ವಿಶೇಷ ತಂಡದಿಂದ ನವೀನ್ ವಿಚಾರಣೆ ನಡೆಯುತ್ತಿದೆ. ವಿವಾದಾತ್ಮಕ ಪೋಟೋವನ್ನು ಕಮೆಂಟ್ ಮೂಲಕ ಪೋಸ್ಟ್ ಹಾಕಿದ್ದು ನಾನೇ. ಆದರೆ ಇದರಿಂದ ಇಷ್ಟೊಂದು ಗಲಭೆ ಆಗುತ್ತದೆ ಎಂದು ಗೊತ್ತಿರಲಿಲ್ಲ. ಸಂಜೆ 7 ಗಂಟೆ ಪೋಸ್ಟ್ ಹಾಕಿ, 8 ಗಂಟೆಗೆ ಡಿಲೀಟ್ ಮಾಡಿದ್ದೆ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಇನ್ನು ಫೋನ್ ಕಳೆದುಹೋಗಿದೆ ಎಂದು ಹೇಳುತ್ತಿರುವ ಆರೋಪಿ ನವೀನ್ ನ ಮೊಬೈಲ್ ಮಾತ್ರ ಇನ್ನೂ ಸಿಕ್ಕಿಲ್ಲ. ಹೀಗಾಗಿ ಫೇಸ್ ಬುಕ್ ಐಡಿ ಹಾಗೂ ಪಾಸ್ ವರ್ಡ್ ಆತನ ಖಾತೆಗೆ ಲಾಗಿನ್ ಆಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!