Monday, June 24, 2024
spot_imgspot_img
spot_imgspot_img

ವಿಟ್ಲ : ಮನೆಯಲ್ಲಿ ಯಾರೂ ಇಲ್ಲದ ವೇಳೆ ನಗ-ನಗದು ದೋಚಿದ ಖದೀಮರು

- Advertisement -G L Acharya panikkar
- Advertisement -

ವಿಟ್ಲ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹಿಂಬಾಗಿಲನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ ಮನೆಯ ಗೋದ್ರೇಜನ್ನು ತೆರೆದು ಅದರಲ್ಲಿದ್ದ ನಗ-ನಗದು ಕಳವುಗೈದ ಘಟನೆ ಬಂಟ್ವಾಳ ತಾಲೂಕು, ಮಾಣಿ ಗ್ರಾಮದ ಪಲಿಕೆ ಎಂಬಲ್ಲಿ ನಡೆದಿದೆ.

ಜಯರಾಜ್ ರವರು ನೀಡಿದ ದೂರಿನಂತೆ, ದಿನಾಂಕ 15-06-2024 ರಂದು ಬೆಳಿಗ್ಗೆ, ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಪಲಿಕೆ ಎಂಬಲ್ಲಿರುವ ಮನೆಯನ್ನು, ಜಯರಾಜ್ ತಮ್ಮ ಸುಜಯ್‌ರವರು ಭದ್ರಪಡಿಸಿ ಹೋಗಿದ್ದು, ಜಯರಾಜ್ ರವರು ಮಧ್ಯಾಹ್ನ ಮನೆಗೆ ಬಂದಾಗ, ಮನೆಯ ಹಿಂಬಾಗಿಲನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ ಮನೆಯ ಗೋದ್ರೇಜನ್ನು ತೆರೆದು ಅದರ ಲಾಕರನ್ನು ಮುರಿದು, ಅದರಲ್ಲಿದ್ದ ಜಯರಾಜ್ ರವರ ಬಾಬ್ತು 12 ಗ್ರಾಂ ತೂಕದ (ಅಂದಾಜು ಮೌಲ್ಯ 78000/-) ಚಿನ್ನದ ಚೈನ್‌ ಮತ್ತು ತಾಯಿಯ ಒಟ್ಟು 4 ಗ್ರಾಂ ತೂಕದ ಕಿವಿಯ ಆಭರಣ (ಅಂದಾಜು ಅಂದಾಜು ಮೌಲ್ಯ ಸುಮಾರು 26,000/- ರೂಪಾಯಿಗಳು) ಹಾಗೂ ಜಯರಾಜ್ ರವರ ಬಾಬ್ತು ಪಾಸ್‌ ಪೋರ್ಟ್‌ ಹಾಗೂ 15000/- ಹಣವನ್ನು ಕಳ್ಳತನ ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 108/2024 ಕಲಂ: 454, 380 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!