ಮಾಜಿ ಸಿ ಯಮ್ ಯಡಿಯೂರಪ್ಪ ವಿರುದ್ಧ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ತಾಯಿ ನೀಡಿದ್ದ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಸಂತ್ರಸ್ತೆಯ ತಾಯಿಯು ತನ್ನ ಮಗಳ ಮೇಲೆ ಬೇರೆಯವರಿಂದ ಅತ್ಯಾಚಾರ ಆಗಿದೆ ಎಂದು ನ್ಯಾಯವನ್ನು ಬಯಸಿ ಯಡಿಯೂರಪ್ಪನವರ ಬಳಿ ಬಂದಿದ್ದು, ಯಡಿಯೂರಪ್ಪನವರು ತಕ್ಷಣ ಐಪಿಎಸ್ ಅಧಿಕಾರಿ ದಯಾನಂದರವರಿಗೆ ಕರೆ ಮಾಡಿ ಈಕೆಗೆ ಸಹಾಯ ಮಾಡಲು ತಿಳಿಸಿದ್ದಾರೆ. ನಂತರ ಸ್ವಲ್ಪ ಸಮಯದ ಬಳಿಕ ಯಡಿಯೂರಪ್ಪನವರ ವಿರುದ್ದವೇ ಪ್ರಕರಣ ದಾಖಲಿಸಿದ್ದಾಳೆ. ಯಡಿಯೂರಪ್ಪನವರು ಎಪ್ಐಆರ್ ಆಗಿದೆ ಎಂದು ತಿಳಿದ ತಕ್ಷಣ ಮಾಧ್ಯಮಗಳ ಮುಂದೆ ಬಂದು ನಗುಮುಖದಿಂದಲೇ ಯಾವುದೇ ಹಿಂಜರಿಕೆ ಇಲ್ಲದೆ ಮಾಧ್ಯಮದವರಿಗೆ ಉತ್ತರಿಸಿದ್ದಾರೆ.
ಈಕೆಯು ಹಲವಾರು ರಾಜಕಾರಣಿಗಳ,ಪ್ರಖ್ಯಾತ ವ್ಯಕ್ತಿಗಳ,ಸೆಲೆಬ್ರಿಟಿಗಳ ವಿರುದ್ದ ಇದೇ ರೀತಿಯಾದಂತಹ ಪ್ರಕರಣ ದಾಖಲಿಸುವುದು ಚಾಲಿಯಾಗಿದೆ. ಒಟ್ಟು ಇಲ್ಲಿಯತನಕ 53 ಕೇಸ್ಗಳನ್ನು ಈಕೆ ಹಲವರ ವಿರುದ್ದ ದಾಖಲು ಮಾಡಿದ್ದಾಳೆ.
ಯಡಿಯೂರಪ್ಪನವರ ವಿರುದ್ಧ ಇದು ಈಕೆಯ 54 ನೇ ಪ್ರಕರಣ ಆಗಿರುತ್ತದೆ. ಹಲವು ಪ್ರಕರಣಗಳು ಮಗಳ ಮೇಲಿನ ಅತ್ಯಾಚಾರ ಎಂದಾದರೆ ಇನ್ನು ಕೆಲವು ಹಣಕಾಸಿನ ಮೋಸ ಆಗಿದೆ ಎನ್ನುವಂತಹದ್ದು ಆಗಿದೆ. ಈಕೆ ಪೊಲೀಸ್ ಅಧಿಕಾರಿಗಳ ಮೇಲೂ ಕೂಡ ಕಂಪ್ಲೇಟ್ ಕೊಟ್ಟಿದ್ದಾಳೆ. ಈಕೆ ಪ್ರತಿಸಲ ಪ್ರಕರಣ ದಾಖಲಿಸಿದಾಗಲು ಕೂಡ ಎಫ್ಐಆರ್ ಆದ ಮೇಲೆ ವಿಚಾರಣೆಗೆ ಹಾಜರಾಗುವುದಿಲ್ಲ. ಈಕೆಯ ಪ್ರತಿ ಕಂಪ್ಲೇಟ್ ಅನ್ನು ಕೂಡ ಈಕೆ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ಮುಕ್ತಾಯಗೊಳಿಸಿದ್ದಾರೆ.
ಹಾಗಾಗಿ ಮಾಜಿ ಸಿಯಮ್ ಯಡಿಯೂರಪ್ಪನವರ ಮೇಲೆ ಬಂದಿರುವ ಈ ಆರೋಪವನ್ನು ಪೊಲೀಸ್ ಇಲಾಖೆಯಾಗಲಿ, ವಿರೋಧ ಪಕ್ಷದವರಾಗಲೀ ಗಂಭೀರವಾಗಿ ಪರಿಗಣಿಸಿಲ್ಲ.