Thursday, April 18, 2024
spot_imgspot_img
spot_imgspot_img

ಕೆ.ಜಿ.ಹಳ್ಳಿ ಘಟನೆಯ ಮತ್ತಿಬ್ಬರು ಸೂತ್ರಧಾರರಿಗಾಗಿ ಪೊಲೀಸರ ಶೋಧ

- Advertisement -G L Acharya panikkar
- Advertisement -

ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ನಾಲ್ವರು ಪ್ರಮುಖ ಸೂತ್ರಧಾರರನ್ನು ಪೊಲೀಸರು ಗುರುತಿಸಿದ್ದಾರೆ. ಈ ಪೈಕಿ ಇಬ್ಬರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ಎಸ್ ಡಿಪಿಐ ಯ ಮುಜಾಮ್ಮಿಲ್ ಪಾಷ, ಶಿವಾಜಿನಗರದ ಸೈಯ್ಯದ್ ಅಜ್ನಾನ್, ಸ್ಥಳೀಯ ಮುಖಂಡ ವಾಜೀದ್ ಹಾಗೂ ಗ್ಯಾಸ್ ಜಾಫರ್ ಈ ಘಟನೆಯ ಪ್ರಮುಖ ಸೂತ್ರಧಾರಿಗಳು. ಮುಜಾಮ್ಮಿಲ್ ಪಾಷ ಹಾಗೂ ಸೈಯ್ಯದ್ ಅಜ್ನಾನ್ ಈಗಾಗಲೇ ಅರೆಸ್ಟ್ ಮಾಡಿದ್ದಾರೆ.

ಠಾಣೆ ಬಳಿ ಗಲಾಟೆ ನಡೆಯುತ್ತಿದ್ದ ವೇಳೆ ಗ್ಯಾಸ್ ಜಾಫರ್ ಹಾಗೂ ವಾಜೀದ್ ಅಲ್ಲಿಯೇ ಇದ್ದರು. ಜನರನ್ನು ಠಾಣೆ ಬಳಿ ಕರೆದುಕೊಂಡು ಬರಲು ವಾಟ್ಸಪ್ ಮೂಲಕ ಮೇಸೆಜ್ ಮಾಡಿದ್ದಾನೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಇವರ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ವಾಜೀವ್ ಎಂಬಾತ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷನಾಗಿದ್ದ.

ಸದ್ಯ ಘಟನೆಯ ಪ್ರಮುಖ ನಾಲ್ವರು ಆರೋಪಿಗಳ ಪೈಕಿ ಇಬ್ಬರು ಅರೆಸ್ಟ್ ಮಾಡಿರುವ ಪೊಲೀಸರು ಮತ್ತಿಬ್ಬರ ಪತ್ತೆಗಾಗಿ ಬಲೆ ಬೀಸಿದ್ದಾರೆ.

- Advertisement -

Related news

error: Content is protected !!