✍? ಮುನ್ನಾ
ಹೆಸರು ಶಾಶ್ವತ ವಾಗಿರಬೇಕು ಆದರೆ ಹೆಸರಿಗಾಗಿ ಮಾತ್ರ ಕಾರ್ಯಸಾಧನೆಯಾಗಬಾರದೆಂದು ದೃಢವಾಗಿ ನಂಬಿ ಪಾಲಿಸಿ ನಮ್ಮೆಲ್ಲರಿಗೂ ಆದರ್ಶಪ್ರಾಯ ರಾದವರು.ತಮ್ಮ ಜೀವಿತಾವಧಿಯಲ್ಲಿ ಹಲವು ರೀತಿಯ ಸಮಾಜದ ಉನ್ನತಿ ಯ ಕಾರ್ಯ ಧಾರ್ಮಿಕ ಸಾಮಾಜಿಕ ಕಳಕಳಿ ಯ ವ್ಯಕ್ತಿತ್ವ ಹಾಗೂ ಹಲವು ಉದ್ಯೋಗ ಸಹಾಯ ದ ಮುಖಾಂತರ ಬಾಳು ಬೆಳಗಿದ ಯುಮುನಾ ಬೋರ್ವೆಲ್ಸ್ ನ ಕೀರ್ತಿಶೇಷ ನುಳಿಯಾಲು ಮನೆತನದ ದಿ. ಕೃಷ್ಣ ಶೆಟ್ಟಿ ಯವರು ಇಂದಿಗೂ ನಮ್ಮನಿಮ್ಮೆಲ್ಲರ ನಡುವಲ್ಲಿ ಅಮರ .
ನೆನಪೆಂಬ ಮಾಯೆಯ ಚಕ್ರವ್ಯೂಹ ನಮ್ಮೆಲ್ಲರ ಜೀವನದ ಒಡನಾಟಗಳನ್ನು ನೆನಪಿಸುವಂತೆ ಮಾಡುವ ಸುಂದರ ಬಲೆ. ಈ ನನ್ನ ನೆನಪಿನ ಸುಂದರ ಕುಂಚದಲ್ಲಿ ಅಚ್ಚಳಿಯದೆ ಉಳಿದ ನೆನಪು ಬದುಕಿಗೆ ನೂರುಪಾಲು ತೂಕಭರಿತ ಅರ್ಥ ಕಲ್ಪಿಸಿ ಜೀವನದ ಪಾಠವನ್ನು ತನ್ನ ಆದರ್ಶ ಜೀವನದ ಅನುಭವದ ಮೂಲಕ ತಿಳಿಸಿಕೊಟ್ಟ ಹಿರಿಯ ಚೇತನ ಇವರು.ತಾನುಂಡು ತನ್ನವರಿಗೂ ಉಣಬಡಿಸುತ್ತಿದ್ದ ಇವರ ಪರೋಪಕಾರಿ ಗುಣ ಎಲ್ಲರ ಮನಸ್ಸಿಗೆ ಹತ್ತಿರವಾದದ್ದು.
ಪುತ್ತೂರಿನ ಮಣ್ಣಿನಲ್ಲಿ ಉದ್ಯಮದ ಕಡೆಗೆ ಮುಖಮಾಡಿ ಯಶಸ್ವಿ ಉದ್ಯಮಿ ದಾವರು.ಹಲವು ದೈವ ದೇವರ ಜೀರ್ಣೋದ್ಧಾರದಂತ ಮಹತ್ಕಾರ್ಯಗಳ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾಗಿ ಪೂರೈಸಿದ ಧಾರ್ಮಿಕ ಧೀಮಂತ. ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಕ್ರೀಡೆ ಹೀಗೆ ಹತ್ತುಹಲವು ಕ್ಷೇತ್ರ ಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಾರ್ಗದರ್ಶನಗೈಯುತ್ತಿದ್ದ ಮಾರ್ಗದರ್ಶಿ ಇಂದು ನಮ್ಮೊಂದಿಗಿಲ್ಲ.
ತನ್ನ ಬಳಗಕ್ಕೆ ತಾನು ಪ್ರತಿಫಲಾಪೇಕ್ಷೆಯನ್ನು ಬಯಸದೆ ಮಾಡಿದ ಸೇವೆ, ಸಹಾಯ,ನೆನಪು ಗಳನ್ನು ಮಾತ್ರ ಬಿಟ್ಟು ಹೋಗಿ ಇಂದಿಗೆ ಎರಡು ವರ್ಷ ಸಂದಿದೆ.ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ಇವರೊಂದಿಗಿನ ಒಡನಾಟದ ಪ್ರತಿಕ್ಷಣ ಮರೆಯಲಸಾಧ್ಯ.ದೇವರ ಪಾದ ಸೇರಿ ನಮ್ಮೆಲ್ಲರನ್ನು ಆಶೀರ್ವದಿಸುತ್ತಿರುವ ನಿಮ್ಮ ದಿವ್ಯ ಪಾದಗಳಿಗೆ ನುಡಿನಮನಗಳು.
ಮತ್ತೆ ನಮ್ಮ ನಡುವಲ್ಲಿ ಹುಟ್ಟಿ ಬನ್ನಿ
✍? Mùńńä