Friday, April 26, 2024
spot_imgspot_img
spot_imgspot_img

ಕೊಡಗಿನಲ್ಲಿ ಹುಲಿ ದಾಳಿಗೆ ಬಾಲಕ, ಮಹಿಳೆ ಬಲಿ: ವ್ಯಾಘ್ರನ ಸೆರೆಗೆ ಅಭಿಮನ್ಯುನ ಸಹಾಯ

- Advertisement -G L Acharya panikkar
- Advertisement -

ಕೊಡಗು: ಕೊಡಗು ಜಿಲ್ಲೆಯಲ್ಲಿ ಹುಲಿ-ಮಾನವ ಸಂಘರ್ಷ ಮುಂದುವರಿದಿದೆ. ನಿನ್ನೆ ಸಂಜೆಯಷ್ಟೇ ಬಾಲಕನೊರ್ವನನ್ನು ಬಲಿ ಪಡೆದ ಹುಲಿ ಇಂದು ಮಹಿಳೆಯೊರ್ವರನ್ನು ಬಲಿ ಪಡೆದಿದೆ.ಪೊನ್ನಂಪೇಟೆ ತಾಲೂಕಿನ ಶೆಟ್ಟಿಗೇರಿ ಗ್ರಾಮದ ಕಾರ್ಮಿಕ ಮಹಿಳೆ ಚಿಣ್ಣಿ(60) ಸಾವನ್ನಪ್ಪಿದ ಮಹಿಳೆ.

ನಿನ್ನೆ ರಾತ್ರಿ ಕುಮಟೂರು ಗ್ರಾಮದ ಅಯ್ಯಪ್ಪ(14) ಎಂಬ ಬಾಲಕ ಹುಲಿ ದಾಳಿಗೆ ಬಲಿಯಾಗಿದ್ದ. ಸೌದೆ ತರಲೆಂದು ಹೋಗಿದ್ದ ವೇಳೆ ಹುಲಿ ದಾಳಿ ನಡೆಸಿತ್ತು. ಹುಲಿ ದಾಳಿಯಿಂದ ಒಂದೇ ದಿನದ ಅಂತರದಲ್ಲಿ ಇಬ್ಬರು ಬಲಿಯಾಗಿರುವ ಕಾರಣ ಪೊನ್ನಂಪೇಟೆ ತಾಲೂಕಿನ ಜನತೆ ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಲಿಯನ್ನು ಕೊಂದು ಹಾಕುವಂತೆ ಆಗ್ರಹಿಸಿದ್ದಾರೆ.ಇತ್ತ ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಮತ್ತಿಗೋಡು ಶಿಬಿರದ ಸಾಕಾನೆಗಳಾದ ಅಭಿಮನ್ಯು ಹಾಗೂ ಗೋಪಾಲಸ್ವಾಮಿ ಆನೆ ಮೂಲಕ ಶೆಟ್ಟಿಗೇರಿಯಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದೆ.

- Advertisement -

Related news

error: Content is protected !!