




ಕೋಲ್ಪೆ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ಯುವಕ ಮಂಡಲ, ಕೋಲ್ಪೆ ದೀಪಾವಳಿ ಕ್ರೀಡೋತ್ಸವ ಮತ್ತು 55ಕೆಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮವು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ವಠಾರ, ಕೋಲ್ಪೆ ಇಲ್ಲಿ ನಡೆಯಿತು.

ಶ್ರೀ ಷಣ್ಮುಖ ಸುಬ್ರಹ್ಮಣ್ಯ ಯುವಕ ಮಂಡಲ, ಕೋಲ್ಪೆ ಇದರ ಅಧ್ಯಕ್ಷ ನೀಲಪ್ಪ ಕೊಡೆಂಚಾರಪಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೋವಿಂದ ಜೋಯಿಸರು, ಪ್ರಧಾನ ಅರ್ಚಕರು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೋಲ್ಪೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸುರೇಶ್ ಕೆ. ಎಸ್. ನಿಕಟ ಪೂರ್ವ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೋಲ್ಪೆ, ಪ್ರಕಾಶ್ ಭಟ್ ಕೆ.ಎಸ್.ಉರಿಮಜಲು , ಪದ್ಮಾನಾಭ ಕೊಂಕೋಡಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪುರುಷೋತ್ತಮ್ ಕೋಲ್ಪೆ ಸ್ವಾಗತಿಸಿ, ಚಂದ್ರಶೇಖರ ಕೊಪ್ಪಳ ವಂದಿಸಿದರು, ದಿನೇಶ್ ಕೊಪ್ಪಳ ನಿರೂಪಿಸಿದರು, ದಯಾನಂದ ಕೆಂರ್ದೇಲು ಸಹಕರಿಸಿದರು.
ಶಿಶು ಮಂದಿರ ಮತ್ತು ಅಂಗನವಾಡಿ ಮಕ್ಕಳಿಗೆ, ಬಾಲಕ- ಬಾಲಕಿಯರಿಗೆ , ಯುವತಿಯರಿಗೆ, ಮಾತೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ.
ನ. 2 ರಂದು ವಿವಿಧ ಬಲಿಷ್ಠ ತಂಡಗಳ ಹೊನಲು ಬೆಳಕಿನ ಮುಕ್ತ ಪ್ರೊ ಮಾದರಿಯ ಮ್ಯಾಟ್ ಅಂಕಣದ ರೋಮಾಂಚನಕಾರಿ ಕಬಡ್ಡಿ ಪಂದ್ಯಾಟವು ಸೂರ್ಯ ಶಾಲಾ ವಠಾರದಲ್ಲಿ ನಡೆಯಲಿದೆ.