- Advertisement -
- Advertisement -
ರಾಜ್ಯ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ವಿರುದ್ಧ ಅಪಸ್ವರ ಕೇಳಿಬಂದಿದೆ. ತಲಾತಲಾಂತರಗಳಿಂದ ಪಾಲಿಸಿಕೊಂಡು ಬರುತ್ತಿರುವ ಆಚರಣೆಯ ವಿರುದ್ಧ ಆಕ್ಷೇಪ ಕೇಳಿಬಂದಿದೆ.
ದೇವಸ್ಥಾನದಲ್ಲಿ ಅಂಗಿ ಬನಿಯನ್ ತೆಗೆಯುವ ಪದ್ಧತಿಗೆ ವಿರೋಧ ವ್ಯಕ್ತವಾಗಿದೆ. ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದೆ.
ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇಗುಲದ ಅಂಗಿ ಬನಿಯನ್ ಪದ್ಧತಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ. ಹಿಂದೂ ಧರ್ಮದಲ್ಲಇಂತಹ ಪದ್ಧತಿಯಿಲ್ಲ. ಇದರಿಂದ ಚರ್ಮ ರೋಗ ಹರಡಬಹುದು. ವಿಕಲಚೇತನರಿಗೆ ಕಷ್ಟವಾಗುತ್ತದೆ. ಇದು ಭಾರತದ ಸಾಂವಿಧಾನಿಕ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದೆ.
- Advertisement -