ವಿಟ್ಲ: ವಿಷ್ಣು ಫ್ರೆಂಡ್ಸ್ ಕುಂಡಡ್ಕ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ 23 ವರ್ಷದ ಒಳಗಿನ ಪುರುಷರ 6 ನೇ ವರ್ಷದ ಕಬಡ್ಡಿ ಪಂದ್ಯಾಟ ವಿಷ್ಣು ಟ್ರೋಫಿ-2023-24 ಕುಳ-ಕುಂಡಡ್ಕ ಗುಣಶ್ರೀ ವಿದ್ಯಾಲಯ ಮೈದಾನದಲ್ಲಿ ಡಿ.30ರಂದು ಸಂಜೆ ಗಂಟೆ 6ಕ್ಕೆ ನಡೆಯಲಿದೆ.
ರಾತ್ರಿ ನಡೆಯುವ ಸಭಾಕಾರ್ಯಕ್ರಮದಲ್ಲಿ ಕುಳ-ಕುಂಡಡ್ಕ ಗುಣಶ್ರೀ ವಿದ್ಯಾಲಯದ ಸಂಚಾಲಕ ವೇಣುಗೋಪಾಲ ಶೆಟ್ಟಿ ಮರುವಾಳ ಸಭಾ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಯುವ ನಾಯಕ ಕಿಶೋರ್ ಕುಮಾರ್ ಬೊಟ್ಯಾಡಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸಹಜ್ ರೈ, ಪುಣಚ ಬಿಜೆಪಿ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷ ಸುಧಾಕರ್ ಶೆಟ್ಟಿ ಬೀಡಿನಮಜಲು, ವಿಟ್ಲ ಮುಡ್ನೂರು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಗೋವಿಂದ ರಾಜ್ ಪೆರುವಾಜೆ, ನಿವೃತ್ತ ಯೋಧ ಸೇಸಪ್ಪ ಗೌಡ ಹಡೀಲು, ವಿಟ್ಲ ಮುಡ್ನೂರು ಗ್ರಾ.ಪಂ.ಅಧ್ಯಕ್ಷ ಪುನೀತ್ ಮಾಡತ್ತಾರು, ಪ್ರಗತಿಪರ ಕೃಷಿಕ ಚೇತನ್ ಪೂಜಾರಿ ಮರುವಾಳ, ವಿಟ್ಲ ಚಂದಳಿಕೆ ಭಾರತ್ ಶಾಮಿಯಾನ ಮಾಲಕ ಸಂಜೀವ ಪೂಜಾರಿ ಚಂದಳಿಕೆ, ಹಿಂದೂ ಮುಖಂಡ ಅಕ್ಷಯ್ ರಜಪೂತ್ ಕಲ್ಲಡ್ಕ, ಗ್ರಾಮ ಸಹಾಯಕ ಲಿಂಗಪ್ಪ ಗೌಡ ಅರ್ಕಲ್ತೋಟ, ಕುಳ-ಕುಂಡಡ್ಕ ಹಾ.ಉ.ಸಂಘದ ಅಧ್ಯಕ್ಷ ತೀರ್ಥರಾಮ ಗೌಡ, ವಿಟ್ಲ ಮುಡ್ನೂರು ಗ್ರಾ.ಪಂ.ಸದಸ್ಯ ಉಮೇಶ್ ಅರ್ಕಲ್ತೋಟ, ಕಬಕ ಸಾನ್ವಿ ಇಂಜಿನಿಯರಿಂಗ್ ವರ್ಕ್ಸ್ ಮಾಲಕ ಮನೋಹರ್ ಶೆಟ್ಟಿ ಜೈನರಕೋಡಿ, ಕುಂಡಡ್ಕ ಪ್ರಶಾಂತ್ ಶಾಮಿಯಾನ ಮತ್ತು ಸೌಂಡ್ಸ್ ಲೈಟಿಂಗ್ಸ್ ಮಾಲಕ ಪ್ರಶಾಂತ್ ಶೆಟ್ಟಿ ಬರೆ, ಪುತ್ತೂರು ನೆಹರುನಗರ ನ್ಯೂ ಫಿಟ್ನೆಸ್ ಜಿಮ್ ಮಾಲಕ ಪ್ರೀತಮ್ ಶೆಟ್ಟಿ ನಿಡ್ಯ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.