Saturday, April 20, 2024
spot_imgspot_img
spot_imgspot_img

ಕುಲಭೂಷಣ್ ಜಾಧವ್ ಅಪಹರಣ ಪ್ರಕರಣ- ಪಾಕ್ ಸೈನಿಕರಿಂದ ಉಗ್ರನ ಹತ್ಯೆ!!

- Advertisement -G L Acharya panikkar
- Advertisement -

ಇಸ್ಲಾಮಾಬಾದ್: ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಇರಾನ್ ನಿಂದ ಅಪಹರಿಸಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದ್ದ ಉಗ್ರನನ್ನು ಪಾಕ್ ಸೈನಿಕರೇ ಹತ್ಯೆ ಮಾಡಿದ್ದಾರೆ.

ಈ ಹಿಂದೆ ಪಾಕ್ ಸೈನಿಕರ ಪರಮಾಪ್ತನಾಗಿದ್ದ ಉಗ್ರ ಮುಲ್ಲಾ ಓಮರ್ ನನ್ನು ಬಲೂಚಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಮುಲ್ಲಾ ಓಮರ್ ಮತ್ತು ಆತನ ಮಗನನ್ನು ಕೂಡ ಪಾಕ್ ಸೇನೆ ಕೊಂದು ಹಾಕಿದೆ.

ಇದಕ್ಕೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಪಾಕ್ ಸೇನೆಯ ಆದೇಶ ಪಾಲಿಸಲು ಉಗ್ರ ಮುಲ್ಲಾ ಓಮರ್ ನಿರಾಕರಿಸಿದ್ದೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ವ್ಯವಹಾರದ ನಿಮಿತ್ತ ಇರಾನಿನ ಬಂದರಿಗೆ ತೆರಳಿದ್ದ ಭಾರತದ ಕುಲ ಭೂಷಣ್ ಜಾಧವ್ ನನ್ನು ಉಗ್ರ ಮುಲ್ಲಾ ಓಮರ್ ಅಪಹರಿಸಿದ್ದ. ಬಳಿಕ ಪಾಕ್ ಸೇನೆಗ ಜಾಧವ್ ನನ್ನು ಹಸ್ತಾಂತರಿಸಿದ್ದ.

ಪಾಕಿಸ್ತಾನ ಕಟ್ಟು ಕಥೆ ಹೆಣೆದಿತ್ತು. ಜಾಧವ್ ನನ್ನು ಪಾಕಿಸ್ತಾನದಲ್ಲಿಯೇ ಬಂಧಿಸಲಾಗಿತ್ತು ಎಂದು ವಾದ ಮಂಡಿಸಿತ್ತು.

- Advertisement -

Related news

error: Content is protected !!